ಉಗಾಭೋಗ (ಎ)
ಎನ್ನ ಪುಟ್ಟಿಸಿದುದಕೆ ಎನ್ನ ಸ್ನಾನವು ಎಲ್ಲ
ಎನ್ನ ಪುಟ್ಟಿಸಿದುದಕೆ ಎನ್ನ ಸ್ನಾನವು ಎಲ್ಲ | ಎನ್ನ ಜಪಗಳೆಲ್ಲ ಎನ್ನ ತಪಗಳೆಲ್ಲಾ | ಎನ್ನ ಧ್ಯಾನಗಳೆಲ್ಲ ಎನ್ನ ಜ್ಞಾನವು ಎಲ್ಲ | ಎನ್ನ ಕರ್ಮಗಳೆಲ್ಲಾ ಎನ್ನ ಪೂಜೆಗಳೆಲ್ಲ | ಎನ್ನ ಭೋಜನವೆಲ್ಲ ಎನ್ನ ಮೌನಗಳೆಲ್ಲ| ಎನ್ನ ಮಾತುಗಳೆಲ್ಲ ಎನ್ನಿಂದಲೇ | ಏನೇನು ಮಾಡಿಸಿದ ಸಾಧನವು | ಎನ್ನ ಪ್ರೇರಣೆಯಿಂದ ನಿನ್ನಾಧೀನವೂ | ನಿನ್ನ ಮನಕೆ ಸರಿಬಂದಂತೆ ಮಾಡು | ಗುರುತಂದೆಗೋಪಾಲವಿಠಲ | ನಿನ್ನ ಧ್ಯಾನವನಿತ್ತು ಸಲಹೊ ಪ್ರಾಣ.
ಎಷ್ಟು ನಾ ಪ್ರಾರ್ಥಿಸಲು ಶಿಷ್ಟಜನ ಪರಿಪಾಲ
ಎಷ್ಟು ನಾ ಪ್ರಾರ್ಥಿಸಲು ಶಿಷ್ಟಜನ ಪರಿಪಾಲ | ದೃಷ್ಟಿಗೆ ದ್ರುಷ್ಟನಾಗೋ ಮುಟ್ಟಿ ಭಜಿಸುವಂತೆ | ಕೊಟ್ಟು ಭಕುತಿಯನಿತ್ತು ಶಿಷ್ಟಜನಸಂಗವಿತ್ತು | ಸೃಷ್ಟಾದಿ ಅಷ್ಟಕರ್ತ ಮಹಿಮನೆ ಸ್ಪಷ್ಟರೂಪವನೆ ತೋರೊ | ಶ್ರೇಷ್ಠ ಗುರುತಂದೆ ಗೋಪಾಲವಿಠಲ | ನಿನ್ನ ಪಟ್ಟಣದೊಲಳಿಟ್ಟು ಸಲಹೊ
ಎಲ್ಲಿ ನೋಡಲು ನೀನಿಲ್ಲದ ಸ್ಥಳವಿಲ್ಲ
ಎಲ್ಲಿ ನೋಡಲು ನೀನಿಲ್ಲದ ಸ್ಥಳವಿಲ್ಲ | ಎಲ್ಲರಲಿ ನೀನು , ಎಲ್ಲ ಪ್ರೇರಕ ನೀನು | ಎಲ್ಲಕ್ಕೆ ಭೇದ ಎಲ್ಲಾ ನಿರ್ಲೇಪ | ಚಿಲ್ಲರೆದೈವರ ಗಂಡ ಗೋಪಾಲವಿಠಲ ನಿನ್ನ | ಬಲ್ಲವರೆ ಬಲ್ಲರುಕಾಣೋ ಪೂರ್ಣರೇಯ.
ಎಷ್ಟುಮಂದಿ ಧರಣಿ ಆಳಿ ಅರಸುಗಳೆನಿಸಿ
ಎಷ್ಟುಮಂದಿ ಧರಣಿ ಆಳಿ ಅರಸುಗಳೆನಿಸಿ | ನಷ್ಟವಾಗಿಪೋದರಲ್ಲ ನೋಡನೋಡಾ | ಕಟ್ಟುಕೊಂಡೊಯ್ದರೆ ತೃಣವಾದರೂ ಹಿಂದೆ | ಇಷ್ಟನಿಷ್ಟಕೆ ಪಾತ್ರರಾಗುವರು | ದಿಟ್ಟ ತಾ ಹರಿಗೋಲದಾಟಿಪನೊಂದು | ಹುಟ್ಟಲಿ ನೀರು ತಿರುಹಿ ಕದೆದಾಟಿಸೆ | ಹುಟ್ಟಿದ ಆ ಕೀರ್ತಿ ಹಾಕಿದವನದು ಎಂದು | ಕೊತ್ತವರಗುಂಟು ಬಹುಮಾನವ | ಎಷ್ಟೇ ಉದಕದಿ ಹುಟ್ಟು ಹೊರಳಿ ಆಡಿದರಕೆ | ಎಷ್ಟು ಹತ್ತೋದು ಜಲವು ಅಷ್ಟೇ ಅಲ್ಲದೆ | ಇಷ್ಟು ಹರಿಯಾಧೀನ ನಂಬಿದಂಬಿಗನಯ್ಯ| ಇಷ್ಟರೊಳು ಚಲುವ ಗೋಪಾಲವಿಠಲ | ಇಷ್ಟನಾಗಿ ಸರ್ವಾಭೀಷ್ಟಗಳನೀವ.
ಎಂತು ಪೋಪದು ಮನದ ಕಿಂತು ಎಂಬೋದು
ಎಂತು ಪೋಪದು ಮನದ ಕಿಂತು ಎಂಬೋದು ಎನ್ನ | ಅಂತರಂಗದಲಿಪ್ಪನು ಸುಂದರಾಂಗ | ಪಿಂಟಿನ ಸಂಸಾರ ಮರದುಪೋಗಿತ್ತು ಈಗ | ಚಿಂತನೆಗೆ ಬಂದು ಬಹುದಣಿಸುವುದು | ಎಂತು ವಿಹಿತದಲ್ಲಿ ಬಿಡಿಸುವೆ ಈ ಅರ್ಥ | ನಿಂತಲ್ಲಿ ಕುಳಿತಲ್ಲಿ ಹತ್ತಿಹ್ಯದು | ನಿಂತು ಮಾತೆಯಲ್ಲಿ ಪುಟ್ಟಿಸಿದವನಾರು | ಚಿಂತಾಯಕದೇವ ಗೋಪಾಲವಿಠಲ | ನಿಸ್ಚಿಂತನಿಗೆ ವಿಷಯನಾಗಿರು ಸರ್ವದಾ.
ಎಡಕೆ ಭಾವಿಯುಂಟು
ಎಡಕೆ ಭಾವಿಯುಂಟು, ಬಲಕೆ ಕೆರೆ ನೋಡು | ಮುಂದೆ ಕಾಡ್ಗಿಚ್ಚು ಹತ್ತಿತು ಯೆಲೊ ದೇವ | ಹಿಂದೆ ಹುಲಿ ಬೆನ್ನಟ್ಟಿಬರುತಲಿದೆ | ಯಾರಿಗೆಯಾರೋ ಪುರಂದರವಿಠಲ.
ಎಡಗೈಯಿಂದಲಿ ನೀರು ಅಭ್ಯಂಗಾಚಮನ
ಎಡಗೈಯಿಂದಲಿ ನೀರು ಅಭ್ಯಂಗಾಚಮನ | ಪೊಡವಿಯೊಳಗೆ ದಾನಮಾಡಿದ ಮನುಜಗೆ | ಎಡೆ ಮೃತ್ಯು ದಾರಿದ್ರ್ಯ ಠಾಕೆ, ಕಟ್ಟುವುದು ಎಂದು | ಒಡನೆ, ಶ್ರುತಿ, ಸ್ಮೃತಿ ಪೇಳುವುದೋ | ಬಡವರಾಧಾರಿ ಶ್ರೀಪುರಂದರವಿಠಲನ್ನ ಸರಿ | ಅಡಿಗಳರ್ಚಿಸಿ ಬಾಳೋ ಅಬ್ಜದಂತೆ.
ಎಡದ ಕೈಯಿಂದ ನೀರ ಎತ್ತಿ
ಎಡದ ಕೈಯಿಂದ ನೀರ ಎತ್ತಿ ಬಲದ ಕೈಯಲಿಟ್ಟು | ಕುಡಿದರೆ ಆರಾಧರಾಪೋಶನಕ್ಕೆ ಮತ್ತದು ಮದ್ಯ | ಎಡೆಯನ್ನ ಗೋಮಾಂಸವೆಂದು ಶ್ರುತಿ ಸಾರುತಿದೆ | ಪೊಡವಿಯಲ್ಲಿ ಪುರಂದರವಿಠಲನಾಜ್ಞೆ.
ಎದೆಯನಾಡಿನಲೊಂದು ಸೋಜಿಗ ಹುಟ್ಟಿ
ಎದೆಯನಾಡಿನಲೊಂದು ಸೋಜಿಗ ಹುಟ್ಟಿ | ಮಿಡಿದು ಮಾಡಿದಂಥ ಕಣಕದ ರೊಟ್ಟಿ | ಅದಕೆ ಸಾಧನ ತೊವ್ವೆ ತುಪ್ಪವನೊಟ್ಟಿ | ಅದರಮೇಲೆ ಸಕ್ಕರೆಯನು ಒಟ್ಟಿ | ಅವನು ಮಲಬಲ್ಲ ಅವ ಜಗಜಟ್ಟಿ | ಪುರಂದರವಿಠಲ ಸುಲಭವು ಗಟ್ಟಿ.
ಎನ್ನ ಕಡೆಹಾಯಿಸುವುದು ನಿನ್ನ ಭಾರ
ಎನ್ನ ಕಡೆಹಾಯಿಸುವುದು ನಿನ್ನ ಭಾರ | ನಿನ್ನ ನೆನೆಯುತಲಿಹುದು ಎನ್ನ ವ್ಯಾಪಾರ | ಎನ್ನ ಸತಿ ಸುತರಿಗೆ ನೀನೆ ಗತಿ | ನಿನ್ನೊಪ್ಪಿಸುವುದು ನನ್ನ ನೀತಿ | ಎನ್ನ ಪಡಿ ಇಕ್ಕಿ ಸಲಹುವುದು ನಿನ್ನ ಧರ್ಮ | ನಿನ್ನ ಅಡಿಗೆರಗುವುದು ಎನ್ನ ಕರ್ಮ | ಎನ್ನ ತಪ್ಪುಗಳೆನೆಣಿಸುವುದು ನಿನ್ನದಲ್ಲ | ನಿನ್ನ ಮರೆತು ಬದುಕುವುದು ಯೆನ್ನದಲ್ಲ | ನೀನಲ್ಲದಿನ್ನಾರಿಗೆ ಮೊರೆಯಿಡುವೆ ಪುರಂದರವಿಠಲ.
ಎನ್ನಮ್ಮ ಸಿರಿದೇವಿ
ಎನ್ನಮ್ಮ ಸಿರಿದೇವಿ, ಇನ್ನು ಅರಿಯಳು ಮಹಿಮೆ | ಕುನ್ನಿ ಮಾನವನು, ನಾನೇನು ಬಲ್ಲವನೆ? | ಪನ್ನಗಾದ್ರಿನಿಲಯನೇ, ಪರಮಪಾವನ್ನ ಕೃಷ್ಣ | ಯೆನ್ನನುದ್ಧರಿಸಯ್ಯಾ ಪುರಂದರವಿಠಲ.
ಎರಡು ಗಳಿಗೆ ಬೆಳಗು ಇರಲು
ಎರಡು ಗಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ | ಕರಾವ ಮುಗಿದು ಮಾಡು ಸಂಕಲ್ಪವೇದ | ಪರಮ ಪುಣ್ಯ ಬ್ರಾಹ್ಮಣ ಧರ್ಮವೆಂದು | ಪುರಂದರವಿಠಲನು ಮೆಚ್ಚಿ ಪಾಲಿಸುವ.
ಎರಿಗಿ ಭಜಿಪೆನೊ ನಿನ್ನ ಚರಣಸನ್ನಿಧಿಗೆ
ಎರಿಗಿ ಭಜಿಪೆನೊ ನಿನ್ನ ಚರಣಸನ್ನಿಧಿಗೆ | ಕರುಣದಿಂದಲಿ ನಿನ್ನ ಸ್ಮರಣೆಯ ಯೆನಗಿತ್ತು | ಮರೆಯದೆ ಸಲಹೋ ಶ್ರೀಪುರಂದರವಿಠಲ.
ಎಲ್ಲಾ ಒಂದೇ ಎಂಬುವರ ಎರಡು
ಎಲ್ಲಾ ಒಂದೇ ಎಂಬುವರ ಎರಡು ದಾಡಿಯಲಿದ್ದ | ಹಲ್ಲುದುರೆ ಬಡಿಯಬೇಕು ಹರಿಭಕ್ತರಾದವರು | ಸಲ್ಲದು ಸಲ್ಲದು ಈ ಮಾತು ಇದಕೆ ಸಂಶಯಬೇಡ | ಕಲ್ಲ ನಾರಿಯಮಾಡಿದ ಪುರಂದರವಿಠಲಣ | ಪಲ್ಲವಾ೦ಘ್ರಿಯನೆನೆದು ಪರಗತಿಯ ಪಡೆಯಿರೊ.
ಎಲ್ಲ ಒಂದೆಂಬರ ಉದರವನ್ನೇ ಸೀಳಿ
ಎಲ್ಲ ಒಂದೆಂಬರ ಉದರವನ್ನೇ ಸೀಳಿ | ಹಲ್ಲುದರಗುಟ್ಟಳಿಬೇಕು ಹರಿಭಕ್ತರಾದವರು | ಸಲ್ಲದು ಸಲ್ಲದು ಈ ಮಾತು, ಸಂಶಯಬ್ಯಾಡಿ | ಕಲ್ಲುನಾರಿಯ ಮಾಡಿದ ಪುರಂದರವಿಠಲ.
ಎಲ್ಲಿ ಹರಿಕಥಾಪ್ರಸಂಗವೊ
ಎಲ್ಲಿ ಹರಿಕಥಾಪ್ರಸಂಗವೊ ಅಲ್ಲಿ ಯಮುನಾ | ಗಂಗಾ, ಗೋದಾವರೀ, ಸರಸ್ವತಿ | ಎಲ್ಲ ತೀರ್ಥವು ಬಂದು ಎಣೆಯಾಗಿ ನಿಲ್ಲಲ್ಲು | ಸಿರಿವಲ್ಲಭ ಪುರಂದರವಿಠಲ ಮೆಚ್ಹಲು, ಜಯ ಜಯ.
ಎಲೆ ಜಿಹ್ವೆ ಕೇಶವನ ನಾಮವನೆ ಸ್ತುತಿಸು
ಎಲೆ ಜಿಹ್ವೆ ಕೇಶವನ ನಾಮವನೆ ಸ್ತುತಿಸು | ಎಲೆ ಕರಗಳಿರ, ಶ್ರೀಹರಿಯ ಪೂಜೆಯಮಾಡಿ | ಎಲೆ ನೇತ್ರಗಳಿರ, ಶ್ರೀಕೃಷ್ಣನ ಮೂರ್ತಿಗಳ ನೋಡಿ | ಎಲೆ ಕಾಲುಗಳಿರ, ಶ್ರೀಹರಿಯ ಯಾತ್ರೆಯ ಮಾಡಿ | ಎಲೆ ನಾಸಿಕವೆ, ಮುಕುಂದನ ಚರಣ ಪರಿಮಳವನಾಘ್ರಾಣಿಸುತಿರು | ಎಲೆ ಶಿರವೆ, ನೀನಧೋಕ್ಷಜನ ಪಾದ ಜಲರುಹದಲ್ಲಿ ಎರಗಿರು | ಎಲೆ ಮನವೆ, ನೀ ವರದ ಕೇಶವ ಪುರಂದರವಿಠಲನ | ಭಕುತಿ ವಿಷಯಗಳಲ್ಲಿ ಅನುದಿನವು ಕಳೆಯುತ್ತಿರು.
ಎಂದಿಗಾದರೂ ನಿನ್ನ ಪಾದಾರಾವಿಂದವೇ
ಎಂದಿಗಾದರೂ ನಿನ್ನ ಪಾದಾರಾವಿಂದವೇ ಗತಿಯೆಂದು ನಂಬಿದೇನೊ | ಬಂಧುಬಳಗವ ಬಿಟ್ಟು ಬಂದೆ ನಿನ್ನ ಮನೆಗಿಂದು | ಮಂಧರಧರ ಗೋವಿಂದ ಪುರಂದರವಿಠಲನೆ, ನೀ ಬಂಧು.
ಎನ್ನೊಡೆಯನೆ ಹನುಮ
ಎನ್ನೊಡೆಯನೆ ಹನುಮ | ಹನುಮನೇ ಎನ್ನೊಡೆಯ | ಘನ್ನ ಕದರುಮಂಡಲಗಿ | ಹನುಮಯ್ಯ ಎನ್ನ ಒಡೆಯ | ಎನ್ನಯ್ಯ ಶ್ರೀ ತಂದೆ ಮುದ್ದುಮೋಹನವಿಠಲ ಭಕ್ತ | ಘನ್ನ ಹನುಮಯ್ಯನೇ ಎನ್ನ ಒಡೆಯ.
ಎನಗೆ ವೈಕುಂಠದಲ್ಲಿ ಯೋಗಿಗಳ
ಎನಗೆ ವೈಕುಂಠದಲ್ಲಿ ಯೋಗಿಗಳ ಹೃದಯದಲ್ಲಿ | ಇನನ ಮಂಡಲದಲ್ಲಿ, ಎಲ್ಲೆಲ್ಲಿರಲು ಶ್ಯಾರದೋ | ಎನ್ನ ಭಕ್ತರ ನೆರೆಗಾನಕಾನೆಲೆ - | ಗೊಂಬೆ ಮುನಿನಾರದ ಕೇಳೆಂದು ಮುದ್ದುವಿಠಲನೆಂದ.
ಎಲ್ಲ ಒಂದೆಂಬರ ಎರೆಡು ದಾಡೆಯಲಿರ್ದ
ಎಲ್ಲ ಒಂದೆಂಬರ ಎರೆಡು ದಾಡೆಯಲಿರ್ದ | ಹಲ್ಲುದರ ಬಡಿಯಬೇಕು ಹರಿಭಕ್ತರಾದವರು | ಸಲ್ಲದು ಸಲ್ಲದು ಎನಲಾಗದು ಸಂಶಯಬೇಡ | ಕ್ಷುಲ್ಲಕ ಸ್ವಾಮಿದ್ರೋಹಿಯ ಕ್ಷುರದಿ ಖಂಡಿಸಬೇಕು | ಕಲ್ಲು ನಾರಿಯಮಾಡಿದ,ಶ್ರೀ ರಾಮಕೃಷ್ಣನ | ಪಲ್ಲವಾ೦ಘ್ರಿಯ ನೆನೆದು ಪರಗತಿ ಪಡೆಯಿರೋ.
ಎನ್ನ ಮನದ ಹರಿದಾಟವನು ಕಳೆಯೋ
ಎನ್ನ ಮನದ ಹರಿದಾಟವನು ಕಳೆಯೋ ವೈಕುಂಠ | ಧಣಿ ದಾಸರೊಡನಾಟ ಕನಿಕರದಿಂ ಕರುಣಾದ್ವೆಂಕಟ | ಘನವಾದ ಸಂಕಟವನು ಕಳೆದು ತವನಿಷ್ಠೆ- | ಯನು ಪಾಲಿಸೈ ಶಿಷ್ಟಜನವರದ ಶ್ರೀರಾಮ.
ಎಂತಾದರು ಬಿದಡೆನಯ್ಯ ಕಂತುಜನಕ
ಎಂತಾದರು ಬಿಡೆನಯ್ಯ ಕಂತುಜನಕ ನಿಮ್ಮ ಪಾದ- | ದಂತಃಕರಣ ಪಡೆವನಕ ಕುಂತಿಸುತರ ಪಾಲ | ಚಿಂತೆ ಪರಿಹಾರನೆ ಭಕ್ತಾನ್ತರಂಗನೆ ಎನ್ನೊ- | ಳಿ೦ತು ನಿರ್ದಯಬೇಡ ಸಂತರೊಡೆಯ ಶ್ರೀರಾಮ.
ಎಲ್ಲಿದ್ದರೇನು ನೀ ವಿಶ್ವವ್ಯಾಪಕನೆಂದು
ಎಲ್ಲಿದ್ದರೇನು ನೀ ವಿಶ್ವವ್ಯಾಪಕನೆಂದು | ಬಲ್ಲೆನೋ ಬಹಳಬಗೆಯಿಂದ ನಾನು | ಸಲ್ಲುವುದೋ ನಮ್ಮ ಸಲಹುವ ಸಖನಾಗಿ ಶ್ರೀ- | ವಲ್ಲಭ ನಾನು ಎಲ್ಲಿದ್ದರೇನು | ನಿಲ್ಲಯ್ಯ ವರದಗೋಪಾಲವಿಠಲ | ಸೊಲ್ಲು ಲಾಲಿಸಿ ಸಲಹೋ ಸತಿ ಶಿಶುವಿನ.
ಎಲೊ ಶುಕನೆ ಕೇಳು ನೀ
ಎಲೊ ಶುಕನೆ ಕೇಳು ನೀ ಬಲುಸುಖಿಯೋ ಪೂರ್ವದಲಿ | ಕೆಲಕಾಲ ನೀ ಬಳ್ಳಿ ಎಲ್ಲ | ಲಲಿತರಸಾಲಫಲ ಪಲ್ಲವ ಮೆಲುವ ನಿನಗೆ | ಬೆಲೆಯೇನಯ್ಯ ನೆಲೆಸಿಲುಕಿದೆ ಗೆಳೆತನಕೆ | ನೆಲೆಯಾವುದೊ ಎನಗೇನು ಗತಿ ಎಲೆ ಪ್ರಿಯನೆ | ಬಲುವ್ಯಾಕುಲವ ಬಿಡಿಸಿ ಸುಲಲಿತದಲಿ | ಸಲಹೋ ಶ್ರೀವರದ ಗೋಪಾಲವಿಠಲ ಪ್ರಿಯನೆ | ಸಿಲುಕೆದೆಯೋ ಇಂದಿನ ದಿನ ಸುದಿನವಯ್ಯ.
ಎನಗೆ ನಿನ್ನಲ್ಲಿ ಭಕ್ತಿ ಇರಲಿ
ಎನಗೆ ನಿನ್ನಲ್ಲಿ ಭಕ್ತಿ ಇರಲಿ ಇಲ್ಲದಿರಲಿ | ಜನರು, ಹರಿದಾಸನೆಂದೆನ್ನ ಕರೆಯುತಾರೆ | ಮನಪಾಪ ಕರಗುವಂತೆ ಅನುದಿನವು ನೀ | ಎನ್ನ ಸಲಹಬೇಕಾಯಿತೆ | ಅನಿಮಿತ್ತಸುಜನಬಂಧು | ಕನಸೀಲಿ ಯಮಭಟರೆನ್ನ ಎಳೆದೊಯ್ವಾಗ | ಘನತೆಗೆ ಸಾಲದಯ್ಯ ತನ್ನವರ ಹಯವದನ | ಅನ್ಯರಿಗೊಪ್ಪಿಸಿದನೆಂಬೊ ದುರ್ವಾರ್ತೆ | ತಪ್ಪಿಸಿಕೊಳ್ಳೋ ತಂದೆ ಮುನಿಜನವಂದ್ಯ.
ಎಂದಿಗೆ ಕಾಂಬೆ ನಾಬೆಳಗು
ಎಂದಿಗೆ ಕಾಂಬೆ ನಾಬೆಳಗು ಮುಂದಿನ್ನು | ಸಂಧಿಸಿದೆ ಕಾಳುಗತ್ತಲೆ ಸುತ್ತಲಿ | ಮಂದಿ ಸಂಗತಿಯ ಈ ಮಾರ್ಗದಲಿ ದೊರೆಯಲಿಲ್ಲ | ಒಂದು ಗ್ರಾಮಕೆ ವೈದು ಸೇರಿಸದೊ |