ಸುಳಾದಿ (ಆ)
||ಅಟ್ಟತಾಳ||
ಆರುಮೊಗನ ಪೆತ್ತ ಚಾರು ಚರಿತ್ರನೆ | ಮೂರಧಿಕ ಶಾರೀರ ವರ್ಣನೆ
ಧಾರುಣಿಯೊಳು ಲಿಂಗಾಕಾರದಿ ಪೂಜ್ಯನೆ | ಘೋರ ನಿಸ್ಸಾರ ಸಂಸಾರದೊಳಗೆ
ಬಿದ್ದು | ಆರೆಂಟು ಅರಿಗಳ ಮೀರಿದೆ ಉಪಟಳ | ಆರಲಾರೆನು ದೇವಾ
ಪಾರುಗಾಣಿಸು ಭವ | ಮಾರ ಶರವ ಹರಿ ಮಾರದೇವನ ವೈರಿ | ಈರ ಪಿತನಭಿನವ
ಪ್ರಾಣೇಶ ವಿಠಲನ | ಚಾರು ದಾಸ್ಯವನೀಯೋ ಶಿವ ಮಹಾದೇವ ||
||ಆದಿತಾಳ||
ಆವಾವ ಜನ್ಮದಲಿ ಅರ್ಚಿಸಿದೆನೋ ನಿನ್ನ | ಆವಾವ ಕಾಲದಲ್ಲಿ ಅನುಗ್ರಹಿಸಿದ
ವರವು | ಈ ವಿದ್ಯಮಾನವಾದ ಜನುಮದಲೊಮ್ಮೆಗನ್ನ | ದೇವಿಯೇ ನಿನ್ನ ಪಾದ
ಸಾರಿದವನಲ್ಲ | ಗೋವತ್ಸನ್ಯಾಯದಿಂದ ನಿನಗೆ ನೀನು ಬಂದು | ಆವದು ಬೇಡಿದ
ವರಗಳ ನೀವೆನೆಂದು | ಸುವಾಣಿಯಿಂದ ಎನ್ನ ಆವರಿಸಿದ ನಿನ್ನ | ಔದಾರ್ಯ
ತನಕಿನ್ನು ಆವದಾವದು ಸಮ | ಶ್ರೀವತ್ಸಲಾಂಛನ ಗುರು ವಿಜಯ ವಿಠ್ಠಲನ್ನ |
ಭಾವದಿಂದಲಿ ನೋಳ್ಪ ಭಾಗ್ಯವೇ ಪಾಲಿಸೇ ||
||ಧೃವತಾಳ||
ಆನಂದ ಪರಿಪೂರ್ಣ | ಶ್ರೀರಂಗನೊಲಿಸಿದ ಮಾನವಿ ರಾಯರ ಶಿಷ್ಯೋತ್ತಮರಾದ
ಮೌನಿ ಶ್ರೀ ಪ್ರಾಣೇಶದಾಸರ ಪ್ರಪೌತ್ರ | ಮಾನಿನಿ ಭಾರತಾಂಬ
ವಿಜಯರಾಯರ ಪುತ್ರ | ಜ್ಞಾನಿ ಕೋಸಿಗಿ ಪ್ರಭುಗುರುಜಗನ್ನಾಥ ಛಾತ್ರ |
ಮೌನಿಸುಗುರು ವರದೇಂದ್ರ ಚರಣಾರ್ಚಕ | ಜಾನಕೀಶ ಅಭಿನವ ಪ್ರಾಣೇಶ
ವಿಠಲನ | ಸಾನುರಾಗದಿ ಪಡೆದ ದಾಸ ಆನಂದ ||
||ಆದಿತಾಳ||
ಆ ಮಹಾಮದದಿಂದ ಭ್ರಾಮಕ ತ್ರಯದಿಂದ | ಸೀಮೆ ಗಾಣದ ಲೋಭ
ಮತ್ಸರದಂಭದಿಂದ | ತಾಮಸಿವರನಾದ ಪಾಮರ ನಾನಯ್ಯ | ಭಾಮಾ ಕಾಂಚನ
ಮೇಣ್ ಭೂಮಿಯ ಚಿಂತನ | ಯಾಮ ದಿವಸ ಕಾಲ ಹೋಮವಾಯಿತು ಸ್ವಾಮಿ |
ಭೀಮ ಪ್ರಿಯಭಿನವ ಪ್ರಾಣೇಶ ವಿಠಲನ | ನೇಮದಲರ್ಚಿಪ ಧೀಮಂತ ನತಿ
ಶಾಂತನೆ ||
||ತ್ರಿವಿಡಿತಾಳ||
ಆರುಮೊಗನ ಪೆತ್ತ ಚಾರು ಚರಿತ್ರಳೆ | ವಾರಣಾರಿ ವೃಷಿಭ ಶ್ಯಂದನಳೆ | ಶ್ರೀರಜ
ಪತಿ ರಾಮ ನಾಮ ಮಂತ್ರವ ಜಪಿಸಿ | ಸರ್ವಮಂಗಳೆಯಾದ ಶರ್ವಾಣಿಯೆ
ನಾರಿಯರಾಭಿಷ್ಟ ಪೂರೈಸುತವರಿಗೆ | ವೀರಪತಿವ್ರತಧರ್ಮ ಮರ್ಮವ ತೋರ್ದ |
ವಾರಿಜನಯನೆ ಮಂಗಳ ಗೌರಿಯೇ | ಮಾರಮಣಭಿನವ ಪ್ರಾಣೇಶ ವಿಠಲನ |
ಚಾರು ಚರಣಗಳಲ್ಲಿ ಮನವ ಪ್ರೇರಿಸು ತಾಯಿ ||