ಸುಳಾದಿ (ವ)
||ಜತೆ||
ವೇದಗಮ್ಯಭಿನವ ಪ್ರಾಣೇಶ ವಿಠಲನ |
ಪಾದಧ್ಯಾನವನಿತ್ತು ಮೋದ ಕೊಡು ನಿತ್ಯ ||
||ತಾಳ ಮಟ್ಟ||
ವಾರಮಂಡಲವರ್ತಿ ವಾರಾಯನಮೂರ್ತಿ | ವಾರದಾತ ಸತತ ವಾರಜನಪ್ರೀತ |
ವಾರತ್ರಿಜಗಜೀಯ ವಾರವೃಂದಗೇಯ | ವಾರಿಜನಕ ಭಾಂಗಕಾರುಣ್ಯಾಪಾಂಗ |
ವಾರಭಿನವಪ್ರಾಣೇಶ ವಿಠಲರಂಗ ||
||ಧೃವತಾಳ||
ವಂದಿಸುವೆನು ಭವ ಮಂದಧಿ ತಾರಕ | ಸಿಂಧು ಶಯನ ರಾಮಚಂದ್ರನಾರ್ಚಕ
ವಸು | ಧೇಂದ್ರರಾಯರ ಕರ ಮಂದಜೋದ್ಭವ ವರ | ದೇಂದ್ರರಾಯನೆ ಯತಿ
ಚಂದಿರನೆ | ಇಂದು ಪ್ರಾರ್ಥಿಪೆ ಕರ್ಮಂದಿಗಳರಸನೆ | ಕಂದರ್ಪಜಿತ ಶರ್ಮ
ವೃಂದ ಸೇವ್ಯ | ಬೆಂದು ಭವದಿ ಬಹು ನೊಂದಿರುವೆನೋ ಸ್ವಾಮಿ |
ಮುಂದಾರಿಗಾಣದೆ ಕುಂದಿರುವೆ | ಬಂದು ಬೇಗನೆ ದಯದಿಂದ ಪಿಡಿಯೋ ಕೈಯ |
ತಂದೆ ಅಭಿನವ ಪ್ರಾಣೇಶವಿಠಲ ಪ್ರಿಯ ||
||ಅಟ್ಟತಾಳ||
ವರದೇಂದ್ರ ಗುರುರಾಜರಿರುವ ಕಾರಣವಿಲ್ಲಿ | ಬರುವುದು ಸಜ್ಜನ ವೃಂದ
ನಿರುತದಲ್ಲಿ | ಧರಿಸುರ ನಿಕರದಿ ಗುರುವಾಸರದಲ್ಲಿ | ಪರಮ ವೈಭವದಿಂದ |
ಮೆರೆವವಂದಣದಲ್ಲಿ | ವರುಷ ವರುಷ ಸಿತ ಕರ್ಕಸಪ್ತಮಿಯಲ್ಲಿ | ವರ ರಥವೇರಿ
ಚತುರ ಪಥದೊಳು ಸಾಗಿ | ಬರುವಂಥ ಗುರುಗಳ ದರುಶನ ಕೊಳ್ಳಲು | ಪರಿಹಾರ
ಪರಿಹಾರ ದುರಿತ ರಾಶಿಗಳೆಲ್ಲಾ | ಧರಣಿ ದೇವರುಗಳ ವರವೇದ ಘೋಷಣ |
ಹರಿದಾಸರು ಗೈವ ಭಜನ ಸುನರ್ತನ | ಪರಮ ಸಂಭ್ರಮಗಳ ವರಣಿಸಲಳವಲ್ಲ |
ಕರಿವರದಭಿನವ ಪ್ರಾಣೇಶ ವಿಠಲನ ದೂತ | ವರದೇಂದ್ರ ಯತಿವರರಿರುವ
ಕಾರಣವಿಲ್ಲಿ ||
||ಆದಿತಾಳ||
ವರುಷ ವರುಷ ಹರಿಮಾಸ ದ್ವಿತೀಯ ಪರ | ಗುರುಗಳ ಪುಣ್ಯ ದಿನೋತ್ಸವ
ಸುಜನರು | ಧರೆಯೊಳು ಎಲ್ಲೆಡೆ ಹರುಷದಿ ಮಾಳ್ಪರು | ವರ ಮಂತ್ರಾಲಯ
ಕ್ಷೇತ್ರದಿ ವಿಭವದಿ | ಗುರುವರ ರಜತ ರಥವನ್ನೇರಿ ಮೆರೆಯುವ | ಪರಿ ಪರಿ ನೂತನ
ವಾದ್ಯ ವಾದನದಿ | ಕರಿಗಳ ಮೇಲಿಹ ಭೇರಿತಾಡನದಿ | ಪರಿಕರ ಕರದಿಹ
ಕುಡಿಕೊಡೆ ಛಡಿ | ಚಾಮರ ದರ ಡಿಂಡಿಮ ತುತ್ತೂರಿ ನಾದದಿ | ಧರೆ ಸುರ ಗಢಣದಿ
ವೇದ ಸಂಘೋಷದಿ ಹರಿದಾಸರ ಭಜನೆಯ ಸಮ್ಮೇಳದಿ | ಶರಣರ ನರ್ತನ ಗಾನ
ವಿನೋದದಿ | ಹರುಷ ನಿರ್ಭರದಿ ಜಯಜಯ ಕಾರದಿ | ಸುರಪ ಮುಖ
ಎರಡೆರಡು ಬೀದಿಯಲಿ | ಮೆರೆಯುತ ಬರುತಿಹ ಗುರುಗಳ ದರ್ಶನ | ದುರಿತ
ಪಲಾಯನ ಪರಗತಿ ಸಾಧನ | ವಿರುವುದು ನಿಜ ನಿಜ ಸಂಶಯ ಸಲ್ಲದು |
ವರಯತಿರಾಟರು ಇರುವ ಕಾರಣದಿ | ಸುರಪನ ಪುರದಂತೆ ತೋರುವುದೀ ಸ್ಥಳ |
ವರಹಜ ಧುನಿ ನಂದನವನ ವೆನಿಪದು | ಕರಿವರದಭಿನವ ಪ್ರಾಣೇಶವಿಠಲನ |
ಚರಣದೊಲುಮೆ ಪಡೆದ ಗುರುರಾಜರಿರುವರಿಲ್ಲಿ ||
||ಆದಿತಾಳ||
ವೇದಗರ್ಭನೆಂಬೋ ಭೂಸುರ ರಾಮನ್ನ | ಪಾದ ಸಂದರುಶನವಾಗದಲೆ ಅ |
ನ್ನೋದಕ ಕೊಳದಿರೆ ರಾಘವ ಭಕ್ತನಿಂ | ದಾದ ಪ್ರತಿಜ್ಞೆಯನು ತಿಳಿದು ತನ್ನ
ಮೂರ್ತಿಯ | ಆದರದಿಂದಲಿ ಕೊಟ್ಟು ಕಳುಹಲಿತ್ತಾ | ಭೂದೇವ ಬಲುಕಾಲ
ಪೂಜಿಸಿ ತೀರ್ಥಯಾತ್ರೆ | ಆದರದಿಂದ ಮಾಡಿ ಕೊಳ್ಳುತ ಬರಲು ಗತಿಗೆ | ಐದುವ
ಕಾಲದಲ್ಲಿ ಸೀತಾರಾಮ ಪ್ರತಿಮೆಯ | ಮೇದಿನಿಯೊಳು ಬಿಟ್ಟು ಪೊಗಲಾಗಿ ಇತ್ತ |
ಸಾಧು ಗುಣವುಳ್ಳ ಮುಕುಂದವರ್ಮನೆಂಬ ಮೇದಿನಿಪತಿಯಾಗಿ ವಡ್ಡಿ ದೇಶದಲ್ಲಿರೆ |
ಆದುದು ಅಶರೀರವಾಕ್ಯ ಆತಗೆ ಕೇಳಿ | ಆದಿತ್ಯ ವಂಶಜ ವಿಜಯವಿಠಲ ರಾಮಾ |
ರಾಧನೆಗೊಳುತಿದ್ದ ಅಜನಿಂದ ಕೋಶದಲ್ಲಿ ||
||ಮಟ್ಟತಾಳ||
ವರಹಜ ತೀರದಲಿ ಚೀಕಲಪರವಿಯಲಿ | ಗಿರಿರಾಜನ ದಯದಿ ಜನಿಸಿದ
ಬಾಲರವಿ | ಪೆರೆಶುಕ್ಲನ ತೆರದಿ ವರ್ಧಿಸಿದನು ಮುದದಿ | ಉರುತರ ಬಡತನದ
ಬೇಗೆ ಯೊಳಿರುತಿರಲು | ನರಹರಿ ಯುತತನ್ನ ಉರ ಕಮಲದಿ ನಿಲ್ಲಿಸಿ | ಸ್ಥಿರ
ಮಾನಸವಾಗಿ ತಪವಾಚರಿಸುತ್ತಿರೆ | ಹರಿ ಪ್ರೇರಣೆಯಿಂದ ಕಾಶಿಗೆ ಐತಂದು | ಹರಿ
ಪದ ಧುನಿ ಗಂಗಾ ತೀರದಿ ನೆಲೆಸುತಲಿ ಗುರುಗಳ ಧೇನಿಸುತ ತಪವಾಚರಿಸುತ |
ನರಹರಿ ಅಭಿನವ ಪ್ರಾಣೇಶ ವಿಠಲನ ಕರುಣದಿಂದಿರುತಿರ್ದ ಕೂಸಮ್ಮ ತನಯ ||
||ಜತೆ||
ವಿಜಯರಾಯರ ನಾಮ ವಿಜಯಕ್ಕೆ ಸೋಪಾನ |
ಅಜನಾಮ ಅಭಿನವ ಪ್ರಾಣೇಶ ವಿಠಲನ ನಾಮ ||
||ಮಟ್ಟತಾಳ||
ವ್ಯಾಸರಾಯರ ಉಪದೇಶವನ್ನೆಕೊಂಡು | ಭಾಸುರ ಜ್ಞಾನ ಪ್ರಕಾಶಿತ ಮನದಿಂದ |
ವಾಸುದೇವನ ಪಾದ ಸರಸಿಜ ಹೃದಯಾಕಾಶದಲಿ ನೋಡಿ | ಮೀಸಲ ಮತಿಯಲ್ಲಿ
ದೇಶದೊಳಗೆ ಮೆರೆದು ನಾಶರಹಿತ ರಂಗ ವಿಜಯ ವಿಠ್ಠಲನ್ನ ದಾಸರೆಂದರೆ
ಪುರಂದರ ದಾಸರೆಂದೆನಿಸುತ್ತ ||
||ಮಟ್ಟತಾಳ||
ವ್ಯಾಸರಾಯರ ಉಪದೇಶವನ್ನೆಕೊಂಡು | ಭಾಸುರ ಜ್ಞಾನ ಪ್ರಕಾಶಿತ ಮನದಿಂದ |
ವಾಸುದೇವನ ಪಾದ ಸರಸಿಜ ಹೃದಯಾಕಾಶದಲಿ ನೋಡಿ | ಮೀಸಲ ಮತಿಯಲ್ಲಿ
ದೇಶದೊಳಗೆ ಮೆರೆದು ನಾಶರಹಿತ ರಂಗ ವಿಜಯ ವಿಠ್ಠಲನ್ನ ದಾಸರೆಂದರೆ
ಪುರಂದರ ದಾಸರೆಂದೆನಿಸುತ್ತ ||