ಸುಳಾದಿ (ಮ)
||ಮಟ್ಟತಾಳ||
ಮೂರನೇ ಯುಗದಲ್ಲಿ ರುಕ್ಮಿಣಿ ದೇವಿಯಲಿ | ಚಾರುದೇಷ್ಣನೆಂಬ
ನಾಮದಲವತರಿಸಿ | ಗೌರಿವರನ ವರದಿ ಕೊಬ್ಬಿದ ರಕ್ಕಸರ | ಕ್ರೂರಕರ್ಮಿಗಳನು
ಶೌರಿಯಾಜ್ಞೆಯಿಂದ | ಮಾರಿಗುಣಿಸಿ ಭೂಮಿ ಭಾರವನಿಳುಹಿದ | ತಾರಕಾರಿ
ಅನುಜ ನತಜನ ಸುರ ಭೂಜ | ಮಾರಪಿತ ಅಭಿನವ ಪ್ರಾಣೇಶ ವಿಠಲನ |
ಭೂರಿ ಕರುಣಕೆ ಪಾತ್ರಾ ಶೌರಿ ಹರಿಪುತ್ರಾ ||
||ತ್ರಿವಿಡಿತಾಳ||
ಮಾಧವನ ದಯದಿಂದ ಆದಿಪೂಜೆಗೆ ಅರ್ಹ | ನಾದ ದೇವನು ನೀನು
ಮೂರ್ಜಗದಿ | ಆ ದೇವ ದನುಜ ಮನುಜರೆಲ್ಲರು ನಿನ್ನ | ಆದಿಯಲ್ಲಿ ನಿನ್ನ
ಪೂಜಿಪರು | ಬಾದರಾಯಣ ಪೇಳ್ದ ಪುರಾಣಂಗಳ ಬರೆದು | ಸಾಧು ಸಜ್ಜನರಿಗೆ
ಮೋದವಿತ್ತೆ | ಶ್ರೀಧವ ಅಭಿನವ ಪ್ರಾಣೇಶವಿಠಲನ | ಪಾದ ಭಜನೆಯಿತ್ತು
ಮೋದಕೊಡುನಿತ್ಯ ||
||ಜತೆ||
ಮೀನಾಂಕ ಜಿತನೆ ಸುಜ್ಞಾನ ಪಾಲಿಸು ಜೀಯಾ | ಮಾನದಭಿನವ ಪ್ರಾಣೇಶ
ವಿಠಲನ ಪ್ರೀಯಾ ||
||ಜತೆ||
ಮನದೊಡೆಯನೆ ಎನ್ಮನ ಚಂಚಲವ ಕಳೆ |
ಘನನಿಭ ಅಭಿನವ ಪ್ರಾಣೇಶ ವಿಠಲನ ಸಖನೆ ||
||ಧೃವತಾಳ||
ಮರುತದೇವನೆ ನಿನ್ನ ಚರಿತೆ ಬಣ್ಣಿಸಲಳವೆ | ಹರ ನೀಲಾಂಬರ ವೀಪರರಿಯರಯ್ಯ |
ಗುರುಗಳ ಕರುಣದಿ ಅರಿತಷ್ಟು ಬಣ್ಣಿಸುವೆ | ಪರಮ ಮಂಗಳ ಮತಿ ಕರುಣಿಸಯ್ಯ
ಹರಿಗೆ ಸಮ್ಮುಖವಾಗಿ ಸ್ವರೂಪ ದೇಹಾದಿದ್ದು | ನಿರುತ ಹಂಸ ಮಂತ್ರ ಜಪಗೈದು
ಶ್ರೀಶನ | ಚರಣದೊಲುಮೆಯ ಪಡೆದ ಗುರುದೇವನೆ | ಸುರರೆಲ್ಲ ಪೂರ್ವದಿ
ವಿಜೋತ್ತುಮರೆಂಬ | ಸ್ಫರ್ಧೆ ನಿನ್ನೊಳು ಶಣಿಸಲು ತವಕದಿ | ಹರಿಯನುಗ್ರಹದಿಂದ
ಎಲ್ಲರ ಜೈಸುತ | ಸರ್ವಜೀವೋತ್ತಮನೆನಿಸಿ ಮೆರೆದ | ಸುರವರ ಅಭಿನವ ಪ್ರಾಣೇಶ
ವಿಠ್ಠಲನ | ಚರಣವಾರಿಜ ದೂತ ದೇವ ಹನುಮಂತ ||
||ತ್ರಿವಿಡಿತಾಳ||
ಮರುತದೇವನೆ ನಿತ್ಯ ಸರ್ವಜೀವರೋಳಿದ್ದು | ಎರಡಾರು ಒಂಭತ್ತು ಸಾಸಿರದಾರು
ನೂರು | ನಿರುತ ಹಂಸ ಮಂತ್ರ ಜಪಗೈಯುತ | ಎರಡೇಳು ಲೋಕದ ಜೀವರ
ಸಲಹುವ | ಶರಣು ಮಹಾರ್ಣವ ಗಾಳಿದೇವಾ | ಕರುಣಾಳು ಅಭಿನವ ಪ್ರಾಣೇಶ
ವಿಠಲನ | ಚರಣದಾಸ್ಯವ ನಿತ್ಯ ನೀಡು ಗುರು ಮಧ್ವ ಮುನಿಪ ||
||ಅಟ್ಟತಾಳ||
ಮಾಯಿಯಮನೆ ಮುಂದೆಮದಕರಿಯಾಗಿದ್ದು | ಆಯುಷ್ಯಾಭಿವೃದ್ಧಿ ಸುಖ
ಬಡುವದಕಿಂತಾ | ನಾಯಿಯ ಮರಿಯಾಗಿ ಮಧ್ವಮತದವರ | ಕಾಯಿದುಮನೆ
ಮುಂದೆ ಇಪ್ಪಕ್ಷಣವೇ ಲೇಸು | ಭೂವ್ಯೋಮ ಪಾತಾಳ ದೊಳಗಿದು ಸಿದ್ಧವು | ರಾಯ
ಧರ್ಮಜ ಮಿಕ್ಕಹರಿದಾಸರ ನೋಡೆ | ಶ್ರೀಯರಸನೇ ಪರನೆಂದು ಪೋದರು ಗತಿಗೆ
ವಾಯು ಮತವ ಬಿಟ್ಟು ಅನ್ಯಮತವಸಾರೆ | ತಾಯಿಯ ಜರಿದು
ಶ್ವಬಚಿಗೆರಗಿದಂತೆ ನೀಯಂತೆ ನಾಮ ಶ್ರೀ ವಿಜಯ ವಿಠ್ಠಲಗೆ | ಮಾಯಿ
ಮತದವರು ಆಗರು ಕಾಣೋ ||
||ತಾಳ ಆದಿ||
ಮುರಹರನೆ ನಿನ್ನ ಸ್ಮರಣೆಯ ಮರೆತೆನು | ಹರಟೆಯೊಳಗೆ ದಿನ ಕಳೆದೆನು ಕಳೆದೆನು |
ದ್ವಿರದಿಯಂತೆ ಮದಭರಿತನು ಸದಾ | ಧರಿಯೊಳು ಚರಿಸುವ ಪರಗತಿ ಗಾಣದೆ
ಕರುಣಿಸು ಕರುಣಿಸು ಕರಪಿಡಿ ರಕ್ಷಿಸು | ಹರಿಯಭಿನವಪ್ರಾಣೇಶ ವಿಠಲಪಾಹಿ ||
||ಜತೆ||
ಮೌನಿ ಸುಜಯೀಂದ್ರ ತೀರ್ಥಗೊಲಿದ ಯತಿನಾಥ |
ಮಾನದಭಿನವ ಪ್ರಾಣೇಶ ವಿಠಲನ ದೂತ ||
ಶ್ರೀ ವಾದಿರಾಜರ ಸ್ತೋತ್ರ ಸುಳಾದಿ
||ಧೃವತಾಳ||
ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ | ಸಾಧು ಸನ್ಮುನಿವರ್ಯ ಸಮ್ಮೋದ
ತೀರ್ಥರಪಾದ | ಸಾದರದಿಂದ ಭಜಿಸಿ ಮೇದಿನಿಗೆ ಭಾರ | ವಾದ ಮಾಯಾ
ವಾದಿಗಳ ಗೆದ್ದ | ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ | ಮಾಧವ ವೇದ
ವೇದ್ಯ ವಿಜಯ ವಿಠಲ ತಾನು | ಆದರದಿಂದವರ ಭುಜದಿ ಹಯವಕ್ತ್ರನಾಗಿ |
ಪಾದವನ್ನು ಇಟ್ಟು ಸ್ವಾದುವಾದ ಕಡಲಿ ಹೂರಣವನುವುಂಡ |
ಶ್ರೀಧರನ ಮಹಿಮೆ ಸಾಧು ಜನರು ಕೇಳಿ ||
||ಆದಿತಾಳ||
ಮನ ಶುದ್ಧರಾಗಿ ಮಾಧವನಂಘ್ರಿಯನು | ದಿನ ದಿನದಲ್ಲಿ ನಂಬಿ ಕೊಂಡಿಪ್ಪರೆ
ಅನವರತಾನಂದ ಗುರು ಮಧ್ವರಾಯರ ದಿವ್ಯ | ವನಜ ಪಾದಂಗಳ ಸ್ಮರಿಸಲು |
ಹನುಮೇಶ ನಮ್ಮ ಸಿರಿ ವಿಜಯ ವಿಠಲ ತಾನು | ಮುನಿವಾದಿರಾಜರ
ಸಾಮಾನ್ಯರೆಂತೆಂದು | ಎಣಿಸಿದವರನ್ನು ಘನವಾಗಿ ಶಿಕ್ಷಿಪ | ಇನತನುಜೋದ್ಭವ
ಕೋಪದಿಂದ ವಾದಿರಾಜರ ಮಹಿಮೆ | ಯನು ಕೊಂಡಾಡಿ ಅನುದಿನ ಸುಜನರು ||
||ಜತೆ||
ಮೋದ ತೀರ್ಥರ ಮತ ಸೇನಾಧಿಪತಿಯಾದ |
ವಾದಿರಾಜ ಮುನಿಯು ವಿಜಯ ವಿಠಲನ ದಾಸ ||
ರಾಗ ನಾಟಿ -ಧೃವತಾಳ
ಮಧ್ವ ವಲ್ಲಭ ಜಯ ಸದ್ವೈಷ್ಣವರ ಪ್ರೀಯಾ | ಅದ್ವೈತ ಮಹಿಮಾ ಜಗದ್ವಿಲಕ್ಷಣ
ರಾಮಾ | ಸದ್ವರ್ಣ ಭೂತ ಭವಿಷ್ಯದ್ವರ್ತಮಾನ ಬಲ್ಲ | ವಿದ್ವಾಂಸರೊಡಿಯಾಘ
ಪ್ರದ್ವಂಸ ಅಪ್ರಮೇಯ | ಸದ್ವೀರ ಏಕಮೇವ ದ್ವಿತೀಯಾ ಪಾ | ದದ್ವಯನೆನಿನಸುವ
ಸದ್ವಾಣಿವುಳ್ಳ ಗು |ರುದ್ವಾರಾ ಸಾರಿದವರ ಹೃದ್ವನಜದಲ್ಲಿದ್ದು | ತದ್ವಿಚಾರ ನಡೆಸುವ
ತದ್ವಿಪರೀತ ಕಾರ್ಯಾ | ಅಧ್ವರ ಭೋಕ್ತ ನಮ್ಮ ವಿಜಯವಿಠಲರೇಯಾ ಮ|
ರುದ್ವಂಶರಿಂದ ನಿತ್ಯ ಸದ್ವಾಲಗ ಕೊಂಡ ಮೂರ್ತಿ ||
||ಅಟ್ಟತಾಳ||
ಮೂಕಬಧಿರರಂತೆ ಲೋಕಕ್ಕೆ ತೋರುತ್ತ | ಶ್ರೀಕರ ರೂಪವ ಹೃದಯದಿ ನಿಲಿಸುತ |
ಮಾಕಳತ್ರನ ನಾಮ ವದನದಿ ಪಾಡುತ್ತ | ಕೋಕನದಾಕ್ಷನ ನೈವೇದ್ಯ ಭುಂಜಿಸತ್ತ |
ಶ್ರೀಕರ ನಿರ್ಮಾಲ್ಯ ಶಿರದೊಳು ಧರಿಸುತ್ತ | ಶ್ರೀ ಕಥಾಸಾರವಗರೆದ ಜಗನ್ನಾಥ |
ಆಕೆವಾಳರ ಹೆಗ್ಗದವ ಕಾಯುತಲಿಹ | ಲೋಕೇಶದಾಸನೆ ಕವಿಕುಲ ತಿಲಕನೆ |
ಮಾಕರ ಅಭಿನವ ಪ್ರಾಣೇಶ ವಿಠಲನ | ಏಕಾಂತದಲಿ ಭಜಿಪ ಭಾಗ್ಯಕೊಡು
ಪ್ರಭುವೆ ||
||ಜತೆ||
ಮಾ ಮನೋಹರದಾಸ ಶ್ಯಾಮಸುಂದರಧೀಶ |
ರಾಮಾಭಿನವ ಪ್ರಾಣೇಶ ವಿಠಲ ದಾಸ ||
||ಮಟ್ಟತಾಳ||
ಮಿನುಗುವ ಕಂಠದಲಿ ಎರಡು ದಳದ ಕಮಲ | ಕರ್ಣಿಕ ಮಧ್ಯದಲ್ಲಿ ಸತಿ
ಸಹಿತಲಿದ್ದು | ವನಜಾಸನ ವಿಡಿದು ತೃಣ ಜೀವರ ತನಕ | ತನುಗಳಿಗೆ ವಿಹಿತವಾದ
ಶಬ್ದಗಳನ್ನು ನೀನೇವೆ ಮಾಡಿ ಅವರವರಿಗೆ ಕೀರ್ತಿ | ಘನತೆಯನೆ ಇತ್ತು
ಕಾಣಿಸಿಕೊಳ್ಳದಲೆ | ಮನುಜಾಧಮರಿಗೆ ಮಾಯವ ಮಸಗಿಸಿ | ಕೊನೆಗುಣದವರನ್ನ
ನಿತ್ಯ ದುಃಖಗಳಿಂದ | ದಣಿಸುವಿ ಪ್ರಾಂತದಲಿ ಕಡೆ ಮೊದಲಿಲ್ಲಾದೆ | ದನುಜ
ಮರ್ದನ ಗುರುವಿಜಯವಿಠ್ಠಲರೇಯ | ನಿನಗಿತ್ತನು ಈ ಪರಿ ಸ್ವತಂತ್ರ
ಮಹಿಮೆಯನು ||
||ತ್ರಿವಿಡಿತಾಳ||
ಮೂರು ಭ್ರಮೆಗಳಿಂದ ಮೂರು ಈಷಣದಿಂದ | ಮೂರೆರಡು ಖಳರಿಂದ
ನೊಂದೆನಯ್ಯಾ | ಮೂರೈದು ದ್ವೀಪಗಳು ಮೂರಾರು ವಿಷಗಳು | ಮೂರು
ಕಾಲಗಳಲ್ಲಿ ತೋರಿಪವು | ಅರಲಾರೆನು ದೇವಘೋರಸಂತಾಪವ |
ಈರನಿಲಯಾಭಿನವಪ್ರಾಣೇಶವಿಠ್ಠಲ ಪಾಹಿ ||
||ಅಟ್ಟತಾಳ||
ಮೂರು ಬಿಡಿಸಿ ಗಡ ಮೂರು ತಿಳಿಪುದಯ್ಯಾ | ಮೂರು ಕಳೆದು ಗಡ ಮೂರು
ಪಾಲಿಸು ಜೀಯ | ಮೂರೆರಡೋಡಿಸು ಮೂರು ಮೂರು ಕೊಡು | ಮೂರೈದು
ಮದಗಳ ಮೂರಾಬಟ್ಟಿ ಮಾಡು | ಮೂರೈದು ಅಕ್ಷರ | ಮೂರುತಿ ತೋರಿಸು |
ಮೂರಾರು ವೇಷಗಳ ಮಾರಿಗೆವಪ್ಪಿಸು | ಮೂರಾರು ಭಕುತಿಯ ಚಾರು ಸಂಪದ
ಕೊಡು | ಮೂರರದಾರಿಯ ತೋರಿಸು ಮಹಾರಾಯ | ಮೂರು ಮೂರ್ತ್ಯಭಿನವ
ಪ್ರಾಣೇಶವಿಠ್ಠಲ ||
||ಆದಿತಾಳ||
ಮಂದರೋದ್ಧರ ನಿನ್ನ ಪೊಂದಿದ ದಾಸರ | ಸಂದಣಿಯೊಳಗಿಟ್ಟಾನಂದವ
ನೀಡಯ್ಯ | ಕಂದುಕೊರಳನುತ ಗಂಧವಾಹನಪಿತ | ತಂದೆ ವೆಂಕಟ ಭವಬಂಧನ
ಬಿಡಿಸಯ್ಯ | ಸಿಂಧುಶಯ್ಯಭಿನವಪ್ರಾಣೇಶ ವಿಠಲರಾಯ ||
||ಅಟ್ಟತಾಳ||
ಮೈಲಿಗೆಯವ ನಾನಾದಡೆ ಜಗದಯ್ಯಾ | ಅಯ್ಯಾನೆ ನಿನ್ನ ಮಂಗಳವಾದ ನಾಮಕ್ಕೆ |
ಮೈಲಿಗೆ ಉಂಟೆನೋ ಮದನಾರಿಯ ಒಡೆಯಾ | ಮೈಲಾರಿ ಜೊಕ್ಕನು ಆವ
ಕುಲದವ | ಅಯ್ಯಾ ವಿಜಯವಿಠಲಾ ಅನುದಿನ ನೀನೊಲಿಯೆ | ವೈವಾದು
ಸದ್ಗತಿಗೆ ಒಂದೆ ನಾಮವ ನೆನೆಯೆ ||