ಸಹವಾಸ
ಕೊಕ್ಕರೆಗಳೆಲ್ಲಾ ಬಾನಿನಲ್ಲಿ ಹಾರುತ್ತಾ ಒಂದು ಹೊಲದಲ್ಲಿ ಇಳಿದು ಬೆಳೆಯನ್ನು ತಿನ್ನಲು ಶುರು ಮಾಡಿದವು,ಅಷ್ಟರಲ್ಲಿ ರೈತನು ಹಾಕಿದ್ದ ಬಲೆಗೆ ಅವುಗಳ ಕಾಲುಗಳು ಸಿಕ್ಕಿ ವಿಲಿವಿಲಿ ಒದ್ದಾಡತೊಡಗಿದವು.ಅಲ್ಲಿಗೆ ಬಂದ ರೈತನನ್ನು ಕಂಡು ಕೊಕ್ಕರೆಯೊಂದು "ಅಯ್ಯಾ ನಾನು ಎಂದಿಗೂ ಬೇರೆಯವರ ಹೊಲಕ್ಕೆ ನುಗ್ಗಿ ಬೆಳೆ ಕದ್ದು ತಿನ್ನುವವನಲ್ಲ,ಈ ದಿನ ನನ್ನ ಗೆಳೆಯರ ಜೊತೆ ಸೇರಿ ಹೀಗೆ ಮಾಡಿದೆ ನಾನು ಬಹಳ ಸಭ್ಯ ನನ್ನನು ಬಿಟ್ಟುಬಿಡು" ಎಂದಿತು.ಅದಕ್ಕೆ ಆ ರೈತನು"ನೀನು ಹೇಳುವುದು ನಿಜವೇ ಇರಬಹುದು ಆದರೆ ಕಳ್ಳರಜೊತೆ ನೀನೂ ಸಿಕ್ಕಿರುವೆ ಆದ್ದರಿಂದ ನೀನೂ ಕಷ್ಟ ಅನುಭವಿಸು" ಎಂದು ಹೇಳಿ ಎರಡು ಮೂರು ದಿನಗಳ ಬಳಿಕ ಎಲ್ಲಾ ಕೊಕ್ಕರೆಗಳನ್ನು ಬಿಡುಗಡೆ ಮಾಡಿದನು.
ನೀತಿ:ಜನರು ನಿನ್ನ ಸಹವಾಸಿಗಳಂತೆ ನಿನ್ನನ್ನೂ ನೋಡುತ್ತಾರೆ