ಉಗಾಭೋಗ (ಉ)
ಉದ್ದರಿಸೊ ಮಹಾರಾಯ ಮಧ್ವಾಂತರ್ಗತ
ಉದ್ದರಿಸೊ ಮಹಾರಾಯ ಮಧ್ವಾಂತರ್ಗತ ಉದ್ಧವ ಪ್ರೀಯ | ಬಿದ್ದಿಹೆ ಸಂಸಾರಾಬ್ಧಿಯೊಳಗೆ ತಾನೆದ್ದೆನೆಂದರೆ ಪದ್ಧತಿ ಕಾಣೆನ್ನುದ್ಧರಿಸೊ ಮಹಾರಾಯ | ಕರ್ಮಕಾಲಫಲ ಊರ್ಮಿಯೊಳಗೆ ನಾ | ನಿರ್ಮಲ ಕಾಣೆನೊ ಶರ್ಮವ ಕೊಟ್ಟನ್ನುದ್ಧರಿಸೊ | ಚಿನ್ನವ ಬಿನ್ನಪ ಮನಕೆ ತಂದು | ಬನ್ನತರಿಪ ಪಥವನ್ನು ತೋರಿಸೆನ್ನುದ್ಧರಿಸೊ | ದಾಸರ ಬಿನ್ನಪ ಎನ್ನ ದೇ ತಂದೆ | ವಾಸುದೆವದೂರಿ ಈ ಸಮಯದಿ ಎನ್ನುದ್ಧರಿಸೊ ||
ಉತ್ತಮೋತ್ತಮ ದೈವ
ಉತ್ತಮೋತ್ತಮ ದೈವ ನಿತ್ಯನೀನಾಗಿರಲಿಕ್ಕೆ | ಮತ್ತೆ ಅನ್ಯ ದೈವನಾರಿಸಲ್ಯಾತಕೆ ||ಧ್ರುವ|| ಸತ್ಯಸನಾತನನೆಂದು ಶ್ರುತಿಸಾರುತಿರಲಿಕ್ಕೆ | ಚಿತ್ತಚಂಚಲವಾಗುವ ಸಂದೇಹವ್ಯಾತಕೆ | ಎತ್ತ ನೋಡಿದರತ್ತ ಪ್ರತ್ಯಕ್ಷ ನೀ ದೊರಲಿಕ್ಕೆ | ಮತ್ತೆ ಆವ್ಹಾನ ವಿಸರ್ಜನವ್ಯಾತಕೆ | ವಾಸವಾಗಿ ಯೆನ್ನಾತ್ಮದೊಳು ನೀನೆ ಎನ್ನ ಈಶನಾಗಿರಲಿಕ್ಕೆ | ಸೋಶಿಲೆ ಅನೇಕ ವೇಷ ದೋರುವುದ್ಯಾತಕೆ ||೨|| ಭಾನುಕೋಟಿತೇಜ ಎನ್ನೊಡಿಯನಾಗಿರಲಿಕ್ಕೆ| ಬಿನುಗುದೈವದ್ಹಂಗು ತಾ ಇನ್ನೊಂದು ಯಾತಕೆ |
ಮನದ ಮಂಗಳನಾಗಿ ನೀ ಮಹಿಪತಿಗೆ ಭಾಸುರಲಿಕ್ಕೆ | ಅನುಭವಕ್ಕನುಮಾನ ಮಾದುವುದ್ಯಾತಕೆ ||೩||
ಉ೦ಬುವ ಬನ್ನಿರೋ ಆನಂದದೂಟವ
ಉ೦ಬುವ ಬನ್ನಿರೋ ಆನಂದದೂಟವ | ಹಂಬಲಿಸಿ ಸವಿದು ತುತ್ತು ಕೊಂಬ ಬನ್ನಿರೋ ||ಧ್ರುವ|| ಬಡಿಸಿಹಿದು ನೋಡಿ ಅನೇಕ ಪರಿಯಲಿ | ಎಡಬಲಕೆ ನೋಡಲಾಗದಾನಂದ ಘನಲೀಲೆ ||೧|| ಇಡಿದು ತುಂಬಿದೇ ನಿಧಾನದೂಟವು | ನೋಡಲಿಕ್ಕೆ ತೃಪ್ತಿಗೈಸುತ್ತಿಹುದು ನೋಟವು ||೨|| ಬೇಡಿಸಿಕೊಳ್ಳದೆ ಬಡಸುತಿಹ್ಯನು | ಮೂಢ ಮಹಿಪತಿ ಒಡೆಯ ಭಾನುಕೋಟಿತೇಜನು ||೩||
ಉದಯವಾಯಿತು ಹೃದಯ ಕಮಲದೊಳಗೆ
ಉದಯವಾಯಿತು ಹೃದಯ ಕಮಲದೊಳಗೆ ||ಧ್ರುವ|| ಗುರುಕರುಣಾನಂದಬೋಧ ಅರುಣೋದಯವಾಯಿತು | ಸ್ಮರಣಿಗರವು ದೊರೆಯಿತು ಹರಿಯು ಚರಣದ ||೧|| ಸಂಯಜ್ನಾನದ ಪ್ರಭೆ ಸಂಯವಾಗಿದೋರಿತು | ತಾಮಸನಿದ್ರೆ ಹರಿಯಿತು ತಿಮಿರಾಂಧದ ||೨|| ಥಳಥಳಿಸುವ ರವಿಕೋಟಿ ಬೆಳಗಾಯಿತು | ಹೊಳೆಯುತ ತೇಜೋನ್ಮಯವು ಒಳಗೊರಗೆಲ್ಲ ||೩|| ಒದಗಿ ಬಂತೆದುರಿಟ್ಟು ಮೊದಲೆ ಪುಣ್ಯದ ಫಲ | ಉದಯವಾಯಿತದ್ರುಷ್ಟವು ಸದೃಷ್ಟವಾಗಿ ||೪||
ಸದ್ಗತಿ ಸುಖವಿದು ಸದೋದಿತವಾಯಿತು | ಸಾಧಿಸಿ ಮಹಿಪತಿಗೆ ಸದ್ಗುರು ಕೃಪೆಯು ||೫||
ಉದಯ ಕಾಲದೊಳೆದ್ದು ಮುದದಿಂದ ಶ್ರೀ ತುಳಸಿ
ಉದಯ ಕಾಲದೊಳೆದ್ದು ಮುದದಿಂದ ಶ್ರೀ ತುಳಸಿ | ಪದುಮನಾಭನ ಸತಿ ಉದ್ಧರಿಸೆನ್ನನೆಂದು | ಉದಕವೆರೆದು ನಮಸ್ಕರಿಸಿ ವಂದಿಸುತಲಿ | ಸುಧೆಯ ಸುರರಿಗಿತ್ತ ಧನ್ವಂತರಿ ನಯನದಿ | ಉದಿಸಿದೆ ಆನಂದ ಅಶ್ರುಗಳಿಂದಲಿ | ಮದಗರ್ವ ಬಿಡಿಸೆನ್ನ ಶುದ್ಧಿಯನ್ನೆ ಮಾಡಿ | ಹೃದಯದಿ ಹರಿಯ ತೋರಿ ರಕ್ಷಿಸೆಂದೆನಲು | ಸದ್ದಿಲ್ಲದೆ ಪೊರೆವ ಗೋಪಾಲಕೃಷ್ಣವಿಠಲ ||