ಸುಳಾದಿ (ಬ)
||ಅಟ್ಟತಾಳ||
ಬನ್ನೂರು ಸ್ಥಳದಲ್ಲಿ ಜನಿಸಿದರು ಬ್ರ | ಹ್ಮಣ್ಯ ತೀರ್ಥರ ಪಾವನ್ನಕರದಲ್ಲಿ ಸನ್ಮನವಾಗಿ
ಪಾಲನವಾದರು ಮುನಿ | ರನ್ನ ಶ್ರೀಪಾದರಾಯನ ಬಳಿಯಲ್ಲಿ | ಚೆನ್ನಾಗಿ ವಿದ್ಯಾ
ಸಂಪನ್ನರಾದರು ಬಲು | ಅನ್ಯ ಮತವ ಬೇವಾಟನ್ಯವಮಾಡಿ ಸುಪ್ರ | ಸನ್ನ
ಕಾರುಣ್ಯವ ಪಡೆದರು | ಚೆನ್ನಾಗಿ ಕೃಷ್ಣ ಶ್ರೀ ವಿಜಯ ವಿಠಲನ್ನ | ಸನ್ನುತಿಸಿ
ಧ್ಯಾನವನ್ನೇ ಕೈಕೊಂಡ ||
||ತ್ರಿವಿಡಿತಾಳ||
ಬಲುಕಾಲ ಲೋಕೇಶ ತನ್ನ ಮನಿಯಲ್ಲಿ | ಚಲುವ ರಾಮನ ಪೂಜೆ ಮಾಡುತಿರಲು |
ಒಲಿದು ಜಾಬಾಲಿಮುನಿ ಪ್ರಾರ್ಥನೆಯಿಂದಲಿ | ಜಲಜ ಸಂಭವನ ಮೆಚ್ಚಿಸಿ
ಬೇಡಲು | ಸಲಿಸಿ ಮಾತನು ಋಷಿಗೆ ಈ ಪ್ರತಿಮೆ ಕೊಡಲಾಗಿ |
ಒಲಿಸಿಕೊಂಡಲ್ಲಿಂದ ಶಿವಗೆ ಕೊಡಲು | ಸುಲಭದಿಂದ ಶಿವನು ತನ್ನಯ ನಿಜ |
ಲಲನೆಗೆ ಕೊಡಲಾಗಿ ವಿನಯದಿಂದ | ಕೆಲವು ದಿವಸ ಗಿರಿಜೆ ಪೂಜಿಸಿ ಆಮೇಲೆ |
ತಿಳಿದು ದಕ್ಷನ ಯಾಗದಲ್ಲಿಗೆ ಬಂದು | ಇಳಿದು ಪೋಗುವಾಗ ಸೌಭರಮುನಿ ಕೈ |
ಯಲ್ಲಿ ಕೊಟ್ಟ ತರುವಾಯ ರಾಮ ಪ್ರತಿಮೆಯನ್ನು ಜಲಗರ್ಭನ ವಶಕೆ ತಂದು
ಕೊಡಲು | ಪೊಳೆವ ಸುಮೇರು ಪರ್ವತದಲ್ಲಿ ಇಟ್ಟು | ನಿಶ್ಚಲ ಪೂಜೆ
ಮಾಡುತಲಿದ್ದಾ ನಂದೂ | ಬಲುದೈವ ವಿಜಯ ವಿಠಲ ಜಾನಕೀಪತಿ |
ಬಲವಂತ ಭಕ್ತರ ಪ್ರಿಯ ಸುಜನಗೇಯ ||
||ಝಂಪೆ ತಾಳ||
ಬೇಡಿಕೊಂಬೆನು ದೇವ ಮೂಡಲಗಿರಿವಾಸ | ಬೇಡದಂತೆ ಪರರ ಮಾಡೆನ್ನನು |
ನೀಡುವನಿನ್ನಂಥ ದೊರೆ ಇರೆ ಸರ್ವದ | ಬೇಡಿದೆ ನರರಕೊಂಡಾಡಿದೆನು |
ಗಾಡಿಕಾರಭಿನವಪ್ರಾಣೇಶವಿಠಲನೆ | ಬೇಡದಂತೆ ಪರರ ಮಾಡೆನ್ನ ಹರಿಯೆ ||
||ಮಟ್ಟತಾಳ||
ಬೆಂದೆನು ಬೆಂದೆನು ಭವದಾನಲದಿಂದ | ನೊಂದೆನೊ ನೊಂದೆನೊ
ಅನುಜಾನುಜರಿಂದ | ಮಂದಿರದೊಳಗಿಹ ಕರ್ಮಂದಿಗಳರಸರ | ಪೊಂದಿ
ಭಜಿಸದಲೆ ಅಂಧಬದಿರನಾದೆ | ಮಂದಜಾಕ್ಷನೆ ಯೆನ್ನಂದಂದುಗ ಪರಿಹರಿಸು |
ತಂದೆ ಅಭಿನವ ಪ್ರಾಣೇಶವಿಠಲ ಪಾಹಿ ||