ಸುಳಾದಿ (ಇ)
||ಅಟ್ಟತಾಳ||
ಇಪ್ಪತ್ತು ಒಂದು ಕುಭಾಷ್ಯವ ರಚಿಸಿರೆ ಒಪ್ಪದಿಂದಲಿ ಗೆದ್ದು ಅವರವರ ಮಹಾ |
ದರ್ಪವ ತಗ್ಗಿಸಿ ದಶ ದಿಕ್ಕು ಪೊಗಿಸಿ ಕಂ | ದರ್ಪ ಜನಕನು ಸ್ವತಂತ್ರ ಗುಣ ಪೂರ್ಣ
ಅಪ್ಪಾರ ಮಹಿಮನು ಸಾಕಾರ ಸತ್ಪುರುಷ | ತಪ್ಪದೆ ತ್ರಿಲೋಕಕ್ಕೊಡೆಯ
ಜಗಜ್ಜೀವ | ನಪ್ಪನು ಸರ್ವಾಂತರಂಗದೊಳಗೆ ಬಿಡ | ದಿಪ್ಪ ವಿಶ್ವಮೂರುತಿ
ವಿಲಕ್ಷಣರೂಪ | ಸರ್ಪಶಯನ ನಮ್ಮ ವಿಜಯ ವಿಠಲರೇಯ | ಮುಪ್ಪಿಲ್ಲದ ದೈವ
ಅಜಭವ ಸುರವಂದ್ಯಾ ||
||ತ್ರಿವಿಡಿತಾಳ||
ಇವರ ಸಂದರುಶನ ಭವಬಂಧ ಮೋಚನಾ | ಇವರ ಚರಣಧ್ಯಾನ ಗಂಗಾ ಸ್ನಾನ |
ಇವರನ್ನ ಸಾರಿದರೆ ಜವನ ನಂಜಿಕೆಯಿಲ್ಲ | ಇವರ ಕವನ ಸ್ತವನ ಶ್ರವಣದಿಂದಾ |
ಪವನ ಸಚ್ಛಾಸ್ತ್ರದ ಪ್ರವಚನ ಫಲವಕ್ಕು | ಇವರಿಂದ ಸ್ಥಳ ಕಾಶಿ ರಾಮೇಶ್ವರಾ|
ಇವರಲ್ಲಿ ಸಮಸ್ತ ದಿವಿಜರು ನೆಲೆಸಿದ್ದು | ಇವರಂದ ವಚನವ ನಡೆಸುವರೂ |
ಇವರಿಲ್ಲಿರಲು ಬಿಟ್ಟು ಅವನಿಸುತ್ತಿದರವಗೆ | ಲವಲೇಶವಾದರೂ ಪುಣ್ಯವಿಲ್ಲಾ |
ಇವರನುಗ್ರಹವಾಗೆ ಶ್ರೀ ಶ್ಯಾಮಸುಂದರನು | ತವಕದಿ ಕರಪಿಡಿದು ಸಲಹುವ
ಸಂತತಾ |
||ಧೃವತಾಳ||
ಇಂದು ಮುಖಿಯೆ ನಿನ್ನ ಸಂದರುಶನದಿಂದಾ | ನಂದವಾಯಿತು ಅರವಿಂದ ನಯನೆ |
ಅಂದಿಗೆ ಗೆಜ್ಜೆ ಮೊದಲಾದಾಭರಣದಿಂದ | ಸುಂದರವಾದ ರೂಪದಿಂದ ಬಂದು |
ಮಂದಹಾಸದಿಂದ ಮಾತನಾಡಿದರಿಂದ | ಬೆಂದು ಪೋದವೆನ್ನ ತ್ರಿವಿಧ ತಾಪ |
ಇಂದಿರೆ ಈ ರೂಪದಿಂದ ತೋರಿದಳು | ಬಂಧುವೆನಿಪ ಲೋಕ ಗುರು ಸತಿಯೊ |
ಕಂದುಕಂಧರ ನಾದ ದೇವನ್ನ ರಾಣಿಯೊ | ಇಂದ್ರಾಣಿ ಮೊದಲಾದಿ
ಜನರೋರ್ವಳೊ | ಮಂದಾಕಿನಿಯೊ ಇದರೊಳೊಂದರಿಯೆ ಕರುಣ | ಸಿಂಧುವೆ
ನಿನ್ನ ಪದಕೆ ನಮೋ ನಮೋ | ಮಂದರ್ಗೆ ಯೋಗ್ಯವಾದ ಮನುಷ್ಯ ದೇಹವನ್ನು |
ಪೊಂದಿಪ್ಪ ಕಾರಣದಿಂದ ನಿನ್ನ | ಅಂದವಾದ ರೂಪ ಕ್ರಿಯೆಗಳನ್ನು ತಿಳಿದು | ವಂದಿಸಿ
ವರಗಳ ಬೇಡಲಿಲ್ಲ | ಇಂದಿರೆ ರಮಣನ ಬಂಧಕ ಶಕುತಿಯು | ಮಂದನಾದವ
ನಾನು ಮೀರುವನೇ | ಕಂದನ ಅಪರಾಧ ವೆಣಿಸದಲೆ ನೀನು | ಅಂದವಚನವನ್ನು
ಸತ್ಯಮಾಡಿ | ಬಂಧು ನೆನಿಸಿಕೊಂಬ ಗುರು ವಿಜಯ ವಿಠ್ಠಲನ್ನ |
ಎಂದೆಂದಗಲದಲಿಪ್ಪ ವರವನೀಡು ||
||ಮಟ್ಟತಾಳ||
ಇದೇ ವೈಕುಂಠಾ ಇದೇ ಶ್ವೇತದ್ವೀಪಾ | ಇದೇ ಅನಂತಾಸನ ಇದೇ ಗೋಕುಲವು |
ಇದೇ ವೃಂದಾವನ ಇದೇ ದ್ವಾರಾವತಿ | ಇದೇ ನಮ್ಮಾ ಯದುಪತಿ ಇಪ್ಪ ನಗರ |
ಇದೇ ನಮ್ಮ ತಿರುಮಲಾ ವಿಜಯವಿಠಲ ನಿಪ್ಪಾ ಸಂಭ್ರಮವೋ ||