ಸುಳಾದಿ (ಶ)
||ಅಟ್ಟ ತಾಳ||
ಶ್ರೀರಾಮಚಂದ್ರನು ಸೇತುಮುಖದಿ ನಿನ್ನ | ಆರಾಧಿಸಿದನು ಸ್ಥಾಪಿಸಿ ಪೂಜಿಸಿ |
ಆರಾವಣಾನುಜ ವಿಭೀಷಣನರ್ಚಿಸೆ | ಭೂರಿ ಲಂಕಾಪುರ ರಾಜ್ಯವ ಪಡೆದನು |
ಶೌರಿ ಆಜ್ಞದಿ ನಿನ್ನ ಪೂಜಿಸಿ ಧರ್ಮಜ | ಭಾರತ ಯುದ್ಧದಿ ಜಯಶೀಲನಾದನು |
ಕೌರವೇಂದ್ರನು ನಿನ್ನ ಭಜಿಸದ ಕಾರಣ | ಪಾರ ಬಂಧುಗಳೊಡನೆ ವಿಲಯವ
ಪೊಂದಿದ | ವಾರಿಧಿಸುತ ನಿನ್ನ ಅಪಹಾಸ್ಯ ಮಾಡಿದ | ಕಾರಣ ಲೋಕದಿ
ಕಳೆಹೀನನಾದನು | ಆರನೇ ಮಾಸದಿ ಸಿತ ಚತುರ್ಥಿಯ ದಿನ | ಹೇರಂಬನೇ
ನಿನ್ನ ವರ್ಧಂತಿಯುತ್ಸವ | ಮೂರು ಲೋಕದಿ ಜನಪಾರ ಹರುಷದಿಂದ |
ಆರಾಧಿಸಿ ನಿನ್ನ ಸೇವಿಸಿ ನಲಿವರು | ಮಾರಮಣನ ದಯವೆಂತುಂಟೊ ನಿನ್ನಲ್ಲಿ |
ಪಾರುಗಾಣೆನು ನಿನ್ನ ಮಹಿಮೆಗೆ ನಮೋ ನಮೋ | ವಾರಿಜೋದರ ತಾನೇ
ತತ್ವೇಶರೊಡಗೂಡಿ | ಸರುವ ಜೀವರೊಳಿದ್ದು ಕಾರ್ಯ ಮಾಡುವನೆಂಬ |
ಚಾರು ಸುಜ್ಞಾನವ ಕರುಣಿಸು ಪಾಲಿಸು | ಬೇರೊಂದು ಬಯಸೇನು ಬಿಜ್ಜೋದರ
ನಿನ್ನ | ವಾರಿಜಾಕ್ಷಭಿನವ ಪ್ರಾಣೇಶ ವಿಠಲನ | ಚಾರು ಚರಣಗಳಲ್ಲಿ ಮನವ ನಿಲ್ಲಿಸು
ಜೀಯಾ ||
||ಧೃವತಾಳ||
ಶ್ರೀ ಗುರುರಾಘವೇಂದ್ರರ ಪರಮ ಮಂಗಲವಾದ | ಚರಿತೆ ಬರೆಯುವೆ ಗುರು
ವರದೇಂದ್ರರಾಯರ | ಕರುಣಾದಿಂದಾ ಪನಿತು ಹರುಷದಿಂದಾ | ಪರಮ
ಚರಣಾಬ್ಜ ಮಧುಕರ ಶಂಖುಕರ್ಣ | ಶರಧಿಜನಾಜ್ಞದಿ ವರ ಕೃಷ್ಣಯುಗದಲ್ಲಿ |
ಉರುಟ ಶಯನ ಸುತನೆನಿಸಿ ಜನಿಸಿ | ಹರಿ ಭಕ್ತಾಗ್ರಣಿಯನಿಸಿ ಹರಿಭಕ್ತಿ ಸುಧೆ
ಸುರಿಸಿ | ಹಿರಿಯನ ಛಲದಿಂದ ವರ ಸಭಾಸ್ತಂಭದಿ | ನರಹರಿಯನ್ನು ತೋರ್ದ
ಪ್ರಹ್ಲಾದನೆ | ಎರಡನೆ ಯುಗದಲಿ ಶಿರದವರ ಜಾತ | ಧರಣಿಜಾಧವ ದೂತ
ವಿಭೀಷಣ | ಎರಡೊಂದು ಯುಗದಲ್ಲಿ ಕುರುಕುಲ ಸಂಜಾತ | ಮುರಹರ
ಸೇವಕನೀತ ಬಾಹ್ಲೀಕ | ಖರ ಯುಗದಲ್ಲಿ ಪ್ರಥಮ ಬನ್ನೂರಾರ್ಯ ಪುತ್ರ |
ಸ್ವರ್ಣವರ್ಣರ ಛಾತ್ರ ವ್ಯಾಸತೀರ್ಥ ಖರಯುಗದಲ್ಲಿ ಅವತರಿಸಿದ ಪುನರಪಿ |
ಧರಿಜಾಪತಿಯ ಚರಣಾರ್ಚನೆಗೈಯಲು | ನರಹರಿ ಅಭಿನವ ಪ್ರಾಣೇಶ ವಿಠಲನ
ಚರಣ ಕಿಂಕರ ಚಂದ್ರ ಗುರು ರಾಘವೇಂದ್ರ ||
||ಧೃವತಾಳ||
ಶ್ರೀ ಮದ್ವಿಠಲ ಪಾದಾಂಬುಜ ಮಧುಪ ರಾಜ | ಶ್ರೀಮದಾಚಾರ್ಯ
ಧೈರ್ಯಯೋಗಧುರ್ಯಾ ಕಾಮವರ್ಜಿತ ಕೃಪಾಸಾಗರ ಯತಿ ರೂಪಾ | ರೋಮ
ರೋಮ ಗುಣ ಪೂರ್ಣ ಪರಣಾ | ಸಾಮ ವಿಖ್ಯಾತ ಸಿದ್ಧ ಸುರರೊಳಗೆ ಪ್ರಸಿದ್ಧ |
ಸೀಮಾ ರಹಿತ ಮಹಿಮ ಭುವನ ಪ್ರೇಮ | ತಾಮಸ ಜನದೂರ ದಂಡ ಕಮಂಡಲ
ಧರ | ಶ್ರೀ ಮಧ್ವಮುನಿರಾಯ ಶೋಭನ ಕಾಯ | ಆ ಮಹಾ ಜ್ಞಾನದಾತ
ಅನುಮಾನ ತೀರಥ | ಕೋಮಲ ಮತಿ ಧಾರ್ಯ ವೈಷ್ಣವಾರ್ಯಾ | ಕಾಮ
ಸುತ್ರಾಮ ಶರ್ವಾದಿಸುರನುತ ಗುರು ಸಾರ್ವ | ಭೌಮ ಅತಿಭಯನಾಶ
ಭಾರತೀಶಾ | ರಾಮ ಕೃಷ್ಣ ವ್ಯಾಸ ವಿಜಯ ವಿಠಲನ ಹೃದಯ | ಧಾಮ
ದೊಳಗೆಯಿಟ್ಟ ಸತತ ಧಿಟ್ಟಾ ||
||ತ್ರಿವಿಡಿತಾಳ||
ಶೂನ್ಯವಾದಿ ಮಿಕ್ಕ ದುರ್ಮತದವರೆಲ್ಲ | ಸನ್ಯಾಯವಿಲ್ಲದ ವಚನದಿಂದ
ಸನ್ಯಾಸಿಗಳೆಂಬೊ ಗರ್ವವಲ್ಲದೆ ವೇದ | ಸನ್ಮತ ವಾಗದ ದುರ್ಲಕ್ಷಣ | ವನ್ನೆ ಕಲ್ಪಿಸಿ
ಶುದ್ಧ ಆಚಾರವನೆ ಕೆಡಿಸಿ | ಭಿನ್ನವಿಲ್ಲವೆಂದು ತಿರುಗುತಿರೆ | ಪುಣ್ಯಶ್ಲೋಕ ನಮ್ಮ
ವಿಜಯ ವಿಠಲನ | ಸನ್ನುತಿಸದೆ ದ್ವೇಷವ ತಾಳಿರೆ ||
||ಅಟ್ಟತಾಳ||
ಶ್ರೀ ಲಕ್ಷ್ಮೀ ಕಮಲ ಪದ್ಮಾಪದ್ಮಿನಿ ಕಮ | ಲಾಲಯೆ ರಮಾ ವೃಷಾಕಪಿ ಧನ್ಯಾ ವೃದ್ಧಿ
ವಿ | ಶಾಲಾ ಯಜ್ಞಾ ಇಂದಿರೆ ಹಿರಣ್ಯ ಹರಿಣಿ | ವಾಲಯ ಸತ್ಯ ನಿತ್ಯಾನಂದೆ
ತ್ರಯಿಸುಧಾ | ಶೀಲೆ ಸುಗಂಧ ಸುಂದರಿ ವಿದ್ಯಾ ಸುಶೀಲೆ | ಸುಲಕ್ಷಣ ದೇವಿ ನಾನಾ
ರೂಪಗಳಿಂದ ಮೆರೆವ ಮೃತ್ಯುನಾಶೆ | ವಾಲಗ ಕೊಡು ಸಂತರ ಸನ್ನಿಧಿಯಲ್ಲಿ | ಕಾಲ
ಕಾಲಕ್ಕೆ ಎನ್ನ ಭಾರ ವೊಹಿಸುವ ತಾಯಿ | ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು |
ಕೇಳಿ ಕೇಳಿ ಬಂದೆ ಕೇವಲ ಈ ಮನ | ಘಾಳಿಯಂತೆ ಪರ ದ್ರವ್ಯಕ್ಕೆ ಪೋಪುದು |
ಏಳಲ ಮಾಡದೆ ಉದ್ಧಾರ ಮಾಡುವ | ಕೈಲಾಸ ಪುರದಲ್ಲಿ ಪೂಜೆಗೊಂಬುವ ದೇವಿ |
ಮೂಲ ಪ್ರಕೃತಿ ಸರ್ವ ವರ್ಣಾಭಿ ಮಾನಿನಿ | ಪಾಲ ಸಾಗರ ಶಾಯಿ ವಿಜಯ
ವಿಠಲನೊಳು | ಲೀಲೆಮಾ(ಯಾ)ಡುವ ನಾನಾ ಭರಣೆ ಭೂಷಣೆ ಪೂರ್ಣೆ ||
||ಆದಿತಾಳ||
ಶ್ರೀಶ ದಾಸವಾಙ್ಮಯ ಕುಸುಮಗಳನು | ದೇಶದಿ ಸುರಿಸುತ ಸೌರಭ ಬೀರುತ |
ಅಸುಪತಿಯ ಸಿದ್ಧಾಂತ ಪಸರಿಸುತ | ಮೇಶ ಭಾಗವತ ಧರ್ಮವ ಹರಹುತ |
ದೇಶದಲ್ಲಿ ಜನಜಾಗ್ರತೆಗೊಳಿಸಿದ | ದಾಸರೆ ಶ್ರೀ ಗುರುಶ್ಯಾಮ ಸುಂದರರೆ | ಹೇಸಿ
ವಿಷಯ ಜಲರಾಶಿಯೊಳಗೆ ಬಿದ್ದು | ಕ್ಲೇಶದಿ ಬಳುಲುತ ತೊಳಲುತಲಿರುವೆನು |
ದಾಸನ ಪಿಡಿಕರ ಉದ್ಧರಿಸುವುದು ಜೀಯ | ವಾಸುದೇವ ಅಭಿನವ ಪ್ರಾಣೇಶ
ವಿಠಲನ | ದಾಸ್ಯಪಥ ತೋರಿದುಪಕಾರ ಮರೆಯೆನು ಜೀಯಾ ||
||ಜತೆ||
ಶ್ರೀವರ ಅಭಿನವ ಪ್ರಾಣೇಶ ವಿಠಲನ | ಚರಣ ದೂಳಿಗಕಾರ ಆನಂದಧೀರ ||
||ಝಂಪೆತಾಳ||
ಶರಣ ಜನ ಮಂದಾರ ಭೃಗುಮುನಿಗಳವತಾರ | ಹರಿದಾಸ ಕುಲರತ್ನ
ವಿಜಯರಾಯ | ಹರಿಮತಾಂಬುಧಿ ಚಂದ್ರ ಪರಮತೋರಗವೀಂದ್ರ | ಹರಿದಾಸ
ನಿಕುರುಂಭ ಪದ್ಮಾರ್ಕನೆ | ಗುರುವರ್ಯ ಪುರಂದರ ಚರಣಾಬ್ಜ ಮಧುಕರ |
ಹರಿದಾಸ ಗೋಪಾಲ ಮನ ಮಂದಿರ | ಹರಿಯಾಶ್ಯ ಅಭಿನವ ಪ್ರಾಣೇಶ ವಿಠಲನ
ಚರಣ ವಾರಿಜ ಭೃಂಗ ದೀನದಯಾಪಾಂಗ ||
||ಝಂಪೆತಾಳ||
ಶ್ರೀಶ ಪ್ರಾಣೇಶದಾಸರ ಛಾತ್ರ ಗೊರೇಬಾಳು | ವಾಸ ಕರಣಿಕ ವೆಂಕಟರಾಯರ
ಪುತ್ರ | ದಾಸ ಗುರು ಕೋಸಿಗಿ ಗುರು ಜಗನ್ನಾಥರ ಛಾತ್ರ | ದೇಶಿಕಾಚಾರ್ಯ
ಗುರು ವರದೇಂದ್ರ ಸದ್ಭಕ್ತ | ದಾಸ ಪ್ರಾಣೇಶ ಪದ ಸುಮನ ಭೃಂಗ |
ವಾಸುದೇವಾಭಿನವ ಪ್ರಾಣೇಶ ವಿಠಲನ | ದಾಸ್ಯವನು ಪಡೆದ ಸುಂದರ
ದಾಸರಾಯ ||
||ಜತೆ||
ಶ್ರೀ ಪಂಢರಿರಾಯಾ ಪ್ರಾಕೃತ ವಿರಹಿತ ಕಾಯಾ |
ಪುಂಡರೀಕ ವರದಾ ವಿಜಯವಿಠಲರೇಯಾ ||