ಸುಳಾದಿ (ಗ)
ತ್ರಿಪುಟತಾಳ
ಗುರುಮುಖವಿರಬೇಕು ಹರಿದೈವನೆನಬೇಕು
ಪರ ಉಪಕಾರ ಇರಬೇಕು ಪ್ರತಿಕ್ಷಣ
ಪರರು ತನ್ನವರು ಸಮವೆಂದು ತಿಳಿಯಬೇಕು
ಹಿರಿದುಹಿಗ್ಗದೆತಾನಸ್ವತಂತ್ರನೆನಬೇಕು
ಪರಮಾಣುಸ್ಥಳದಲ್ಲಿ ಹರಿವ್ಯಾಪ್ತನೆನಬೇಕು
ಈ ಪರಿಯಲ್ಲಿ ತಿಳಿದರೆ ಅವನೆ ಮುಕ್ತಿಯೋಗ್ಯ
ಸಿರಿಯರಮಣ ನಮ್ಮ ಗೋಪಾಲವಿಠಲನ್ನ
ಕರುಣಕ್ಕೆ ಪಾತ್ರನಾದವನೆ ಇದನರಿವ
||ತ್ರಿವಿಡಿತಾಳ||
ಗಜಮುಖ ಜನಕನೆ ಕುಜನ ಕುಠಾರನೆ | ಅಜ ಸುತ ಬಲ ಸಾಮಜ ಮರ್ದನ |
ಅಜಿನಾಂಬರ ಧರ ಸುಜನ ಮನ ಮಂದಿರ | ವಿಜಯ ಸನ್ನುತ ಪಾದಾಂಬುಜ
ಶಂಭುಶಂಕರ | ತ್ರಿಜಗಪಾಲಾಭಿನವ ಪ್ರಾಣೇಶ ವಿಠಲನ | ಭಜನೆ ಪಾಲಿಸು
ಜೀಯಾ ಸುಜನಗಣಗೇಯ ||
||ರೂಪಕತಾಳ||
ಗುರುವಾರು ಸಂಕರಗೆ ಕರೆದು ಉಪದೇಶವ | ನರುಹಿದ ನಾವನೊ ಪೇಳೊ
ಮುಗ್ಧಾ | ಹರಿವ ನದಿಯೊಳಗೆ ಈಸಿ ಪೋಗುತಲಿರಲು | ವರಯಜ್ಞೋಪವೀತ
ಜಿಗುಳಿ ಪೋಗೆ | ಜರಿದು ಗೃಹಸ್ಥಾಶ್ರಮ ಸನ್ಯಾಸಾಶ್ರಮಕೆಮನ | ಎರಗಿ ನಮ್ಮ
ಸತ್ಯ-ಪ್ರಾಜ್ಞತೀರ್ಥರ ಕೇಳೆ | ಪರಿಹಾರವಾದ ಉತ್ತರ ಕೊಡಲು ತಾನೆ |
ದುರುಳ ಮತಿಯಲಿ ಚತುರಾಶ್ರಮವೆ ಕೊಂಡಾ | ಹಿರಿಯರ ಮತವಿದು
ಪುಶಿಯಲ್ಲ ಮಾತು ಚ | ತುರರ್ಗತ ವಿಜಯ ವಿಠ್ಠಲನೆ ಸಾಕ್ಷಿ ||
||ಆದಿತಾಳ||
ಗುರು ವ್ಯಾಸಮುನಿಯೆಂದು ಧರುಣಿಯೊಳಗೆ ಪೆಸರಾಗಿ | ನೆರೆದು ಸಜ್ಜನರಿಗೆ
ಗರೆದು ನ್ಯಾಯ ಶಾಸ್ತ್ರ | ಅರುಹಿ ವೈಷ್ಣವ ಮತ ಅದರಿಂದ ಉದ್ಧರಿಸಿ | ಪೊರೆದು
ನಂಬಿದವರ ಎರಡೊಂದು ಜನ್ಮ ಸುಂ |ದರ ಗರ್ಭದಲ್ಲಿ ಬಂದು ಪರಿಪೂರ್ಣ ಜ್ಞಾನ
ಭಕ್ತಿ ವೈರಾಗ್ಯದಲ್ಲಿ ನಡೆದು | ಎರಡೊಂದು ಉತ್ತಮ ಗುರು ಸಂತತಿಯೊಳಗೆ | ಚರಿಸಿ
ಚತುರಾಶ್ರಮ ಧರಿಸಿ ಚತುರರಾಗಿ ಭರತಖಂಡದೊಳು ಪಸರಿಸಿ ಕೀರ್ತಿಯ
ಪಡೆದು | ಭರದಿಂದ ವಾಲಗವು ಸುರರಿಂದ ಕೈಗೊಳುತ | ಪರಲೋಕದಲಿ ಒಪ್ಪಿ
ನಿರಾಮಯ ಗುಣನಿಧಿ ವಿಜಯ ವಿಠಲರೇಯನ | ನೆರೆನಂಬಿ ಪ್ರತಿದಿನ ಮೆರೆದು
ಮೂರ್ಧನ್ಯರಾಗಿ ||
||ಆದಿತಾಳ||
ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ ಸಂತಾಪವ ಕೊಡುತಿಪ್ಪ ಮಹಾ ಕಠೋರೆ
ಉಗ್ರೆ | ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ | ತಾಪತ್ರಯ ವಿನಾಶೆ ಓಂಕಾರ
ಹೂಂಕಾರೆ | ಪಾಪಿ ಕಂಸಗೆ ಭಯ ತೋರಿದೆ ಬಾಲಲೀಲೆ | ವ್ಯಾಪುತೆ ಧರ್ಮ
ಮಾರ್ಗ ಪ್ರೇರಣೆ ಅಪ್ರಾಕೃತೆ | ಸ್ವಾಪ್ನದಲ್ಲಿ ನಿನ್ನ ನೆನೆಸಿದ ಶರಣನಿಗೆ |
ಅಪಾರವಾಗಿದ್ದ ವಾರಿಧಿಯಂತೆ ಮಹಾ | ಆಪತ್ತು ಬಂದಿರಲು ಹಾರಿ ಪೋಗೋವು
ಸಪ್ತ | ದ್ವೀಪ ನಾಯಿಕೆ ನರಕ ನಿರ್ಲೀಪೆ ತಮೋಗುಣದ | ವ್ಯಾಪಾರ ಮಾಡಿಸಿ ಭಕ್ತ
ಜನಕೆ ಪುಣ್ಯ | ಸೋಪಾನ ಮಾಡಿಕೊಡುವ ಸೌಭ್ಯಾವಂತೆ ದುರ್ಗೆ | ಪ್ರಾಪುತವಾಗಿ
ಎನ್ನ ಮನದಲಿ ನಿಂದು ದುಃಖ ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮಂಗಳ |
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ | ಆಪಾದ ಮೌಳಿ ತನಕ ಭಜಿಸಿ
ಭವ್ಯರಾದರು | ನಾ ಪೇಳುವದೇನು ಪಾಂಡವರ ಮನೋಭಿಷ್ಟೇ | ಈ ಪಂಚ
ಭೌತಿಕದಲ್ಲಿ ಆವ ಸಾಧನ ಕಾಣೇ ಶ್ರೀಪತಿನಾಮ ಒಂದೇ ಜಿಹ್ವಾಗ್ರದಲಿ ನೆನೆವ |
ಔಪಾಸನ ಕೊಡು ರುದ್ರಾದಿಗಳ ವರದೆ | ತಾಪಸ ಜನಪ್ರೀಯ ವಿಜಯ ವಿಠಲ
ಮೂರ್ತಿಯ | ಶ್ರೀ ಪಾದಾರ್ಚನೆ ಮಾಳ್ಪಾ ಶ್ರೀ ಭೂ ದುರ್ಗಾವರ್ಣಾಶ್ರಯೆ ||
||ಧೃವತಾಳ||
ಗುರುಗಳ ಕರುಣವೆ ದಾರಿದ್ರ್ಯ ಭಂಜನ | ಗುರುಗಳ ಕರುಣವೆ ಮಹದೈಶ್ವರ್ಯ
ಕಾರಣ | ಗುರುಗಳ ಕರುಣವೆ ಸಕಲ ರೋಗ ಹರಣ | ಗುರುಗಳ ಕರುಣವೆ ಸಕಲ
ದುಃಖನಾಶನ | ಗುರುಗಳ ಕರಣವೆ ಸಕಲ ಸುಖಸಾಧನ | ಗುರುಗಳ ಕರುಣವೆ
ಪರಮ ಮಂಗಲಪ್ರದ | ಗುರುಗಳ ಕರುಣವೆ ದುರಿತಾಂಬುಧಿಗೆ ನೌಕಾ | ಗುರುಗಳ
ಕರುಣವೆ ಭೂತ ಪ್ರೇತೋಚ್ಛಾಟನೆ | ಗುರುರೂಪ ನಾಮ ಕ್ರೀಯಾ ಬಾದರಾಯಣ
ವಿಠಲ ಗುರುಪಾದ ಶರಣನ್ನ ಅಪರಾಧವೆಣಿಸಾನು ||
||ಮಟ್ಟತಾಳ||
ಗುರುಗಳ ಕರುಣವೆ ಉತ್ತುಂಕನ ಪಾಲಿಸಿತು | ಗುರುಗಳ ಕೃಪೆಯಿಂದಾ ಧೃವನಿಗೆ
ಹರಿವಲಿದಾ | ಗುರುಗಳ ದಯದಿಂದಾ ಪ್ರಹ್ಲಾದನು ಗೆದ್ದಾ | ಗುರು ಕರುಣಿಸಲು
ಸಂಚಿತಾಗಮಿ ಒಂ | ದರ ನಿಮಿಷದಿ ಸುಟ್ಟು ಪೋಗುವದೆ ಸತ್ಯಾ | ಗುರು ಕರುಣವೆ
ತಾರಕ | ಗುರು ಮೂರುತಿ ಬಾದರಾಯಣ ವಿಠಲ ಗುರು ಶರಣರಿಗೊಲಿದಂತೆ ಅನ್ಯ
ಜನರಿಗೊಲಿಯಾ ||
||ತ್ರಿವಿಡಿತಾಳ||
ಗುರುಗಳ ಚರಣಾಬ್ಜ ಸ್ಮರಿಸಿದ ಫಲಕ್ಕಿನ್ನು | ಸರಿಯಾದ ಪುಣ್ಯ ಈ ಧರೆಯೊಳುಂಟೆ |
ಸುರಭಿನಿಕರ ಚಾಮಿಕರ ಸಿರಿ ಕನ್ಯಾ ಮಂದಿರ ಧರಣಿ ದಾನಕ್ಕಧಿಕ ಕಾಣೋ | ಬರೆ
ಮಾತಲ್ಲವೊ ತ್ರಿಕರಣ ಸಾಕ್ಷಿವೈಯ್ಯಾ | ಗುರುವೆ ಪರದೈವಾ ಗುರುವೆ ದೈವಾ |
ಗುರುವಂತರ್ಯಾಮಿ ಶ್ರೀ ಬಾದರಾಯಣ ವಿಠಲ ಗುರುವೆಂದಿನಿಸಿ ತನ್ನ ಶರಣ
ಜನರ ಕಾವಾ ||
||ಜತೆ||
ಗುರು ಪಾದೋದಕ ಗುರುಚ್ಚಿಷ್ಠ ಭುಂಜಿಸಿ | ಗುರುವಂತರ್ಯಾಮಿ
ಶ್ರೀ ಬಾದರಾಯಣ ವಿಠಲನ ನಂಬು ||
||ಜತೆ||
ಗುರುಭಕ್ತ ಉತ್ತುಂಗ ಗುರುಪಾದ ಸುಮಭೃಂಗ |
ಹರಿನಾಮ ಅಭಿನವ ಪ್ರಾಣೇಶವಿಠಲನ ದಾಸ ||
||ಮಟ್ಟತಾಳ||
ಗಾಯತ್ರೀ ಮಂತ್ರ ಪುರಶ್ಚರಣೆಯಲ್ಲಿ | ತಾಯಿಯ ಒಲಿಸಿದನು ಮೌನ ತಪಸಿನಲಿ |
ಬೀಯ ಮಾಡುತಲೊಬ್ಬ ಮರಳುವ ನೀರೆರೆಯೆ | ಘಾಯಗೊಂಡು ತಾನೆ
ಬಹುಪರಿ ಬಳಲಿದನು | ವಾಯುಭಕ್ಷನೊಮ್ಮೆ ಶಿರದಲಿ ಫಣವಿರಿಸೆ | ಕಾಯವ
ಸುತ್ತಿರಲು ಕಂಡು ಜನರು ಬೆದರೆ | ತೋಯಜಾಕ್ಷ ಅಭಿನವ ಪ್ರಾಣೇಶ ವಿಠಲನ
ಪ್ರೀಯ ದಾಸರಿಗುಂಟೆ ನೋವು ಭಯವು ||
||ಜತೆ||
ಗೋಪಾಲದಾಸರ ಚರಿತೆ ಪಠಿಸೆ ನಿತ್ಯ |
ಗೋಪಾಭಿನವ ಪ್ರಾಣೇಶವಿಠಲ ಒಲಿವಾ ||